ರಾಜ್ಯದ ವಿವಿಧೆಡೆಯಿಂದ ಪಾದಯಾತ್ರೆಗೆ ಹರಿದುಬಂದ ಜನರಲ್ಲಿ ಬಹುತೇಕರಿಗೆ ರಾಹುಲ್, ಇಂದಿರಾ ಗಾಂಧಿ ಮೊಮ್ಮಗ ಎಂಬುದೇ ಕುತೂಹಲದ ಕೇಂದ್ರವಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ ಭೂಮಿ ಪಡೆದವರು, ಬರಗಾಲದಲ್ಲಿ ಪಡಿತರದ ನೆರವು ದೊರೆತವರು ಅಭಿಮಾನದಿಂದ ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಹಿರಿಯೂರು, ಚಳ್ಳಕೆರೆ ದಾಟಿಯಾತ್ರೆಯು ಮೊಳಕಾಲ್ಮುರು ತಲುಪುತ್ತಿದ್ದಂತೆಯೇ ಈ ಅಭಿಮಾನ ಇಮ್ಮಡಿಗೊಂಡಂತೆ ಕಾಣುತ್ತಿದೆ.