ರಾಮನಗರ: ಜಿಲ್ಲೆಯ ಮಾಗಡಿ ಹಾಗು ಚನ್ನಪಟ್ಟಣ ತಾಲ್ಲೂಕುಗಳ 62 ಗ್ರಾ.ಪಂ.ಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 88.26ರಷ್ಟು ಮತದಾನ ನಡೆದಿದೆ.
ಚನ್ನಪಟ್ಟಣ ತಾಲ್ಲೂಕಿನಲ್ಲಿ 89.99 ಮಂದಿ ಮತ ಚಲಾಯಿಸಿದರೆ, ಮಾಗಡಿ ತಾಲ್ಲೂಕಿನಲ್ಲಿ ಶೇ 86.54 ಮತದಾರರು ಮತದಾನ ಮಾಡಿದ್ದಾರೆ.
ಕೊಪ್ಪಳ: ಜಿಲ್ಲೆಯ ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗರಿ ತಾಲ್ಲೂಕುಗಳಲ್ಲಿ ಸಂಜೆ 5ಕ್ಕೆ ಕೊನೆಗೊಂಡ ಮತದಾನದಲ್ಲಿ ಶೇ 81.99ರಷ್ಟು ಮತದಾನವಾಗಿದೆ.
ಯಾವುದೇ ಕೋವಿಡ್ ರೋಗಿಗಳು ಮತ ಚಲಾಯಿಸಿಲ್ಲ. ಬಹುತೇಕ ಸುಗಮ, ಶಾಂತಿಯುತ ಚುನಾವಣೆ ನಡೆಯಿತು.
ತಾಲ್ಲೂಕು ಪಂಚಾಯಿತಿ ಮತದಾನ ವಿವರ (ಶೇ)
ಕುಷ್ಟಗಿ 36 81.05
ಗಂಗಾವತಿ 18 81.82
ಕಾರಟಗಿ 11 81.65
ಕನಕಗಿರಿ 11 86.8
ಒಟ್ಟು 76 81.99
ರಾಯಚೂರು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆವರೆಗೂ ಶೇ 77.11 ರಷ್ಟು ಮತಗಳು ಚಲಾವಣೆ ಆಗಿವೆ.ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 76.82, ಸಿಂಧನೂರು ತಾಲ್ಲೂಕಿನಲ್ಲಿ ಶೇ 78.62 ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ಶೇ 74.61 ರಷ್ಟು ಮತದಾನವಾಗಿದೆ
ಚಿತ್ರದುರ್ಗ: ಮತಚಲಾಯಿಸಿದ ಬಳಿಕ ನಿತ್ರಾಣಗೊಂಡ ವೃದ್ಧೆಯೊಬ್ಬರು ಮತಗಟ್ಟೆ ಹೊರಗೆ ಮೃತಪಟ್ಟ ಘಟನೆ ಹಿರಿಯೂರು ತಾಲ್ಲೂಕಿನ ಬಿರೇನಹಳ್ಳಿಯಲ್ಲಿಯಲ್ಲಿ ಭಾನುವಾರ ನಡೆದಿದೆ.
ಶಿವಪುರದ ಸರೋಜಮ್ಮ (90) ಮೃತಪಟ್ಟವರು. ಬಿರೇನಹಳ್ಳಿ ಮತಗಟ್ಟೆಗೆ ಬಂದಿದ್ದ ಅವರು ಹಕ್ಕು ಚಲಾವಣೆ ಮಾಡಿದ ಬಳಿಕ ಅಸ್ವಸ್ಥರಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡುವ ಮೊದಲೇ ಮೃತಪಟ್ಟರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದ 2ನೇ ವಾರ್ಡ್ನಲ್ಲಿ ಶ್ರೀಶೈಲ ಪೀಠ ಹಾಗೂ ಯಡೂರದ ಕಾಡಸಿದ್ದೇಶ್ಬರ ಮಠದ ಪೀಠಾಧಿಪತಿ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ ಚಲಾಯಿಸಿದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಮತಗಟ್ಟೆಗೆ ಕೆಲವರು ಚಕ್ಕಡಿಯಲ್ಲಿ ಬಂದು ಮತ ಚಲಾಯಿಸಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವೂರ ಬೂತ್ನಲ್ಲಿ ಕೋವಿಡ್ ಪಾಸಿಟಿವ್ ಮತದಾರರು ಪಿಪಿ ಕಿಟ್ ಧರಿಸಿ, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಬಳ್ಳಾರಿ: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ 64.32 ರಷ್ಟು ಮತದಾನವಾಗಿದೆ