‘ಸಂತ್ರಸ್ತೆಯರು ದೂರು ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಶನಿವಾರ ಮೂವರು ಸಂತ್ರಸ್ತೆಯರು ಹಾಗೂ ಆಂತರಿಕ ತನಿಖಾ ಸಮಿತಿಯ ಒಬ್ಬ ಸದಸ್ಯರ ಹೇಳಿಕೆಗಳನ್ನು ಪಡೆಯಲಾಗಿದೆ. ಅದರ ಆಧಾರದ ಮೇಲೆ ಬಂಧಿಸಲಾಗಿದೆ. ಆರೋಪಿಯು ಸಂತ್ರಸ್ತೆಯರನ್ನು ಕುಂದಾಪುರ, ಮುರ್ಡೇಶ್ವರ, ಮಡಿಕೇರಿ, ಪಿರಿಯಾಪಟ್ಟಣಗಳಿಗೆ ಕರೆದೊಯ್ದು, ಇದೇ ರೀತಿಯ ವರ್ತನೆ ತೋರಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ’ ಎಂದು ಹೇಳಿದ್ದಾರೆ.