ಭೂ ಸ್ವಾಧೀನದ ಸುರುಳಿ ರೈತ ಸಮುದಾಯವನ್ನು ನಿರ್ಗತಿಕರನ್ನಾಗಿಸುತ್ತಿದೆ. ಅಧಿಕಾರಿಗಳು, ಮಧ್ಯವರ್ತಿಗಳ ಮಾಫಿಯಾ ಶ್ರೀಮಂತರಾಗಿರುವುದು ವಾಸ್ತವ ಸತ್ಯ. ದೇವನಹಳ್ಳಿ ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣ ಹೊರತಾಗಿ ದೊಡ್ಡಬಳ್ಳಾಪುರ ಗಡಿ ಭಾಗದಲ್ಲೂ ಸಾವಿರಾರು ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಸಾಮಾಜಿಕ ಅಧ್ಯಯನ ಮತ್ತು ಪರಿಸರ ಪ್ರಭಾವದ ಮೌಲ್ಯಮಾಪನ ಮಾಡದೆ ಬೆಲೆಬಾಳುವ, ಬೆಳೆ ಬೆಳೆಯುವ ಉತ್ಕೃಷ್ಟ ಭೂಮಿಯನ್ನು ಲಪಟಾಯಿಸಲು ಕೆಐಡಿಬಿಯನ್ನು ಬಳಸಿಕೊಳ್ಳಲಾಗುತ್ತಿದೆ. ಸ್ವಾಧೀನ ಕಾಯ್ದೆಯ ನಿಯಮಗಳೆಲ್ಲವೂ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ.