‘ನಾನು 2108ರಲ್ಲಿ ಮುಖ್ಯಮಂತ್ರಿ ಆಗುವವರೆಗೂ ಉಪನಗರ ರೈಲು ಯೋಜನೆ ದೂಳು ಕುಡಿಯುತ್ತಿತ್ತು. 14 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಾನು, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಮಾಡಿ ಚರ್ಚಿಸಿದ್ದೆ. ಎರಡೇ ತಿಂಗಳಲ್ಲಿ ₹ 23,000 ಕೋಟಿ ವೆಚ್ಚದ ಯೋಜನಾ ಪ್ರಸ್ತಾವ ಸಿದ್ದಪಡಿಸಿ, ಸಲ್ಲಿಸಿದ್ದೆ. ತಕ್ಷಣ ಶಂಕುಸ್ಥಾಪನೆಗೆ ಮನವಿ ಮಾಡಿದ್ದೆ. 2019ರ ಲೋಕಸಭಾ ಚುನಾವಣೆಗೂ ಮೊದಲು ಅಡಿಗಲ್ಲು ಹಾಕಲ್ಲು ನಿರ್ಧರಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ದುರುದ್ದೇಶದಿಂದ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.