ಇದಕ್ಕೆ ಟ್ರಸ್ಟಿನ ಹಿರಿಯ ಸದಸ್ಯರಾದ ಹಿ.ಶಿ.ರಾಮಚಂದ್ರೇಗೌಡ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದು, ‘ಅಧಿಕಾರಿಗಳಿಗೆ ಜನಪದದ ಗಂಧ–ಗಾಳಿ ಕಡಿಮೆ. ಹೀಗಾಗಿ ಜನಪದ ಹಿನ್ನೆಲೆ ಉಳ್ಳವರನ್ನೇ ಆರಿಸಬೇಕು’ ಎಂದು ಆಗ್ರಹಿಸಿದರು. ಈ ವಿಚಾರದಲ್ಲಿ ಒಮ್ಮತ ಮೂಡದ ಕಾರಣಕ್ಕೆ ರಾಮಚಂದ್ರೇಗೌಡ, ಜಯಪ್ರಕಾಶ ಗೌಡ ತಮ್ಮ ಸದಸ್ಯ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ.