ಚಿಕ್ಕಮಗಳೂರು: ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ತನಿಖಾ ತಂಡವು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮದಲ್ಲಿ ಭಾನುವಾರ ಮಾಹಿತಿ ಕಲೆ ಹಾಕಿದೆ.
ಚನ್ನಗಿರಿ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಚಂದ್ರಶೇಖರ್ ಅವರು ಗೌರಿಗದ್ದೆಗೆ ಬಂದುಹೋಗಿದ್ದ ಕುರಿತು ವಿವರ ಪಡೆದಿದ್ದಾರೆ. ಸಿ.ಸಿ. ಟಿವಿ ಕ್ಯಾಮೆರಾ ಫೂಟೇಜ್ ಸಂಗ್ರಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.