ಕೆಂಪು ಕೋಟೆ, ಅಶೋಕ ಸ್ಥಂಭ, ಸಂಸತ್ ಭವನ ಸೇರಿದಂತೆ ಭಾರತದ ಇತಿಹಾಸ ಸಾರುವ ಹಲವು ಪಾರಂಪರಿಕ ಕಟ್ಟಡಗಳಿವೆ. ಸರಳತೆಗೆ ಸಾಕ್ಷಿಯಾಗಿರುವ ಸಾಬರಮತಿ ಆಶ್ರಮವು ಮಹಾತ್ಮ ಗಾಂಧಿಯವರ ‘ಸೆಂಟ್ರಲ್ ವಿಸ್ತಾ’ ಆಗಿತ್ತು. ಅದು ಅಸ್ಪೃಶ್ಯತೆ ನಿರ್ಮೂಲನೆ, ಅಂತರ್ ಧರ್ಮೀಯ ಸೌಹಾರ್ದ, ಸತ್ಯ ಮತ್ತು ಅಹಿಂಸೆಯ ಸಂಕೇತದಂತೆ ಇದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.