ಬಿಬಿಎಂಪಿ ಚುನಾವಣೆ ಕುರಿತ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳಾದ ಎಸ್.ಅಬ್ದುಲ್ ನಜೀರ್ ಹಾಗೂ ಜೆ.ಕೆ.ಮಹೇಶ್ವರಿ ಅವರನ್ನು ಒಳಗೊಂಡ ಪೀಠವು, ‘ರಿಟ್ ಅರ್ಜಿ ಹಾಗೂ ಸಂಬಂಧಿಸಿದ ವಿಷಯಗಳನ್ನು ಅರ್ಹತೆಯ ಮೇಲೆ ಹಾಗೂ ಕಾನೂನಿಗೆ ಅನುಸಾರವಾಗಿ ಹೈಕೋರ್ಟ್ ನಿರ್ಧರಿಸುವುದು ನ್ಯಾಯಸಮ್ಮತ ಹಾಗೂ ಸರಿಯಾದುದು ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿತು.