ಶಿರಾ: ಕರಿರಾಮನಹಳ್ಳಿ ಗ್ರಾಮದ ಮೂಡಲಪಾಯ ಯಕ್ಷಗಾನ ಭಾಗವತ ಹನುಮಂತ ರಾಯಪ್ಪ ಅವರಿಗೆ 2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷಸಿರಿ’ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಮೂಡಲಪಾಯ ಯಕ್ಷಗಾನ ಕಲೆಯ ಪುನರುಜ್ಜೀವನಕ್ಕಾಗಿ ತಮ್ಮ ಜೀವನ ಅರ್ಪಿಸಿಕೊಂಡಿರುವ 96 ವರ್ಷದ ಇವರು ಬಾಲ್ಯದಲ್ಲಿಯೇ ಕೂಲಿ ಮಠದಲ್ಲಿ ಅಮರಕೋಶ, ರಾಮಾಯಣ, ಮಹಾಭಾರತವನ್ನು ಕಲಿತರು. 6 ತಿಂಗಳ ಕಾಲ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ್ದರು.