ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ‘ಎನ್ಪಿಎಸ್ ನೌಕರರ ಸಮಸ್ಯೆ ಪರಿಹಾರದ ಕುರಿತು ಸಂಘದ ಅಧ್ಯಕ್ಷರು ಒಂದು ದಿನವೂ ರಾಜ್ಯ ಸರ್ಕಾರದ ಜತೆ ಚರ್ಚಿಸಿಲ್ಲ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಷಡಾಕ್ಷರಿ ಮುಖ್ಯಮಂತ್ರಿಯವರ ಸಹಾಯಕರಾಗಿದ್ದರು. ಆಗಲೂ ನೌಕರರ ಪರ ಧ್ವನಿ ಎತ್ತಿಲ್ಲ’ ಎಂದರು.