<p>ಚನ್ನಪಟ್ಟಣದ ಹನಿಯೂರಿನಲ್ಲಿ ಈಗ ಗ್ರಾಮದೇವತೆ ಮಾರಮ್ಮನ ಜಾತ್ರೆಯ ವೈಭವ. ಮೂಕಮಾರಮ್ಮ, ಮೂಗುಮಾರಿ, ಮೂಕಿಮಾರಿ ಎಂಬಿತ್ಯಾದಿ ಹೆಸರಿನಿಂದ ಕರೆಸಿಕೊಳ್ಳುವ ಈ ಮಾರಮ್ಮನ ಉತ್ಸವ ಇದೇ 26ರಂದು ನಡೆಯಲಿದೆ. ಈ ಮಾರಮ್ಮನಿಗೆ ಮೂಕಮಾರಮ್ಮ ಎಂದು ಹೆಸರು ಬಂದಿರುವ ಬಗ್ಗೆ ಐತಿಹ್ಯ ಹೀಗಿದೆ: ರಾವಣನ ತಪಸ್ಸಿಗೆ ಮೆಚ್ಚಿದ ಶಿವ, ಪಾರ್ವತಿ ಸಹಿತನಾಗಿ ಪ್ರತ್ಯಕ್ಷನಾಗುತ್ತಾನೆ. ಪಾರ್ವತಿಯ ಸೌಂದರ್ಯ ನೋಡಿದ ರಾವಣ ಆಕೆಯನ್ನೇ ಬೇಡುತ್ತಾನೆ. ಭಕ್ತನ ಆಸೆ ಈಡೇರಿಸುವುದು ಶಿವನ ಜಾಯಮಾನ. ಆದುದರಿಂದ ಆತ ಪಾರ್ವತಿಯನ್ನು ರಾವಣನ ಹಿಂದೆ ಕಳುಹಿಸುತ್ತಾನೆ.<br /> <br /> ಹಿಂದೆ ಬರುತ್ತಿರುವ ಪಾರ್ವತಿಯನ್ನು ರಾವಣ ಪ್ರತಿಸಲ ನೋಡಿದಾಗಲೂ ಆಕೆ ಕಾಳಿ, ಭದ್ರಕಾಳಿ, ಮಾರಮ್ಮ... ಈ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಭಯಗೊಂಡ ರಾವಣ, ಶಿವನ ಬಳಿ ಬಂದಾಗ ಶಿವನು ಪಾರ್ವತಿಯ ಕೈ ಹಿಡಿದುಕೊಂಡು ಹೋಗುವಂತೆ ತಿಳಿಸುತ್ತಾನೆ. ಆದರೆ ಪಾರ್ವತಿ ಪುನಃ ರಾವಣನಿಗೆ ಕೋಪ ಬರುವಂತೆ ನಡೆದುಕೊಳ್ಳುತ್ತಾಳೆ. ಸಿಟ್ಟಿಗೆದ್ದ ರಾವಣ ಅರಮನೆಗೆ ಕರೆದೊಯ್ಯುತ್ತಾನೆ.<br /> <br /> ಮಾರಿಯ ರೂಪದಲ್ಲಿ ಮೂಕವಾಗಿದ್ದ ಪಾರ್ವತಿಯನ್ನು ಗ್ರಾಮಸ್ಥರ ಮೂಲಕ ಒಲಿಸಿಕೊಳ್ಳಲು ರಾವಣ ಇಚ್ಛಿಸುತ್ತಾನೆ. ಆಕೆಯ ದೇಗುಲ ನಿರ್ಮಾಣ ಮಾಡಿ ಗ್ರಾಮಸ್ಥರಿಂದ ಪೂಜೆಗೆ ಒಳಪಡಿಸುತ್ತಾನೆ. ದೇವಾಲಯದಲ್ಲಿದ್ದ ದೇವಿ ಭಕ್ತರ ಪೂಜೆಗೆ ಒಲಿದು ಮಾತನಾಡುತ್ತಾಳೆ. ಇದೇ ಮುಂದೆ `ಮೂಗುಮಾರಮ್ಮ' ಆಯಿತು ಎನ್ನುತ್ತದೆ ಪುರಾಣ. 4 ದಿನ ನಡೆಯುವ ಜಾತ್ರೆಯಲ್ಲಿ ಮಹಾಪೂಜೆ, ಕೊಂಡ ಹಾಯುವುದು, ಪೂಜಾಕುಣಿತ, ಕರಗ ಹೀಗೆ ಅನೇಕ ವಿಧಿವಿಧಾನಗಳು ನಡೆಯುತ್ತವೆ.<br /> <br /> ಹೀಗೆ ಬನ್ನಿ: ಚನ್ನಪಟ್ಟಣದಿಂದ ಬರುವುದಾದರೆ, ಸಾತನೂರು-ಚನ್ನಪಟ್ಟಣ ರಸ್ತೆಯಲ್ಲಿ (ಹೊಂಗನೂರಿನಲ್ಲಿ ಎಡಕ್ಕೆ) ಸುಮಾರು 15 ಕಿ.ಮೀ. ಕ್ರಮಿಸಬೇಕು. ಕನಕಪುರ ರಸ್ತೆಯ ಕಡೆಯಿಂದ ಬರುವುದಾದರೆ, ಸಾತನೂರಿನಿಂದ ಚನ್ನಪಟ್ಟಣ-ಸಾತನೂರು ರಸ್ತೆಯಲ್ಲಿ ಸುಮಾರು 8 ಕಿ.ಮೀ. ದೂರದಲ್ಲಿದೆ.<br /> <br /> ಇಲ್ಲಿಗೆ ಬಂದರೆ, ಸಮುದ್ರಮಟ್ಟದಿಂದ ಸುಮಾರು 3,600 ಅಡಿ ಎತ್ತರವಿರುವ ಬೃಹತ್ ಏಕಶಿಲಾ ಬೆಟ್ಟ ಶ್ರೀಗವಿಂಗಸ್ವಾಮಿ ಬೆಟ್ಟ' ವನ್ನೂ ನೋಡಬಹುದು. ಚಾರಣಿಗರಿಗೂ ಇದು ಹೇಳಿಮಾಡಿಸಿದಂತಿದೆ. ಇದಲ್ಲದೆ, ಕಬ್ಬಾಳಮ್ಮ ದೇವಾಲಯ, ಕಬ್ಬಾಳು ದುರ್ಗವನ್ನೂ ನೋಡಬಹುದು. ಹಾಗೆಯೇ ಪ್ರಸಿದ್ಧ ನಿಸರ್ಗಧಾಮಗಳಾದ ಮೇಕೆದಾಟು-ಸಂಗಮ ಮತ್ತು ವನ್ಯಧಾಮವೆನಿಸಿದ ಮುತ್ತತ್ತಿ ಸವಿ ಸವಿಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಪಟ್ಟಣದ ಹನಿಯೂರಿನಲ್ಲಿ ಈಗ ಗ್ರಾಮದೇವತೆ ಮಾರಮ್ಮನ ಜಾತ್ರೆಯ ವೈಭವ. ಮೂಕಮಾರಮ್ಮ, ಮೂಗುಮಾರಿ, ಮೂಕಿಮಾರಿ ಎಂಬಿತ್ಯಾದಿ ಹೆಸರಿನಿಂದ ಕರೆಸಿಕೊಳ್ಳುವ ಈ ಮಾರಮ್ಮನ ಉತ್ಸವ ಇದೇ 26ರಂದು ನಡೆಯಲಿದೆ. ಈ ಮಾರಮ್ಮನಿಗೆ ಮೂಕಮಾರಮ್ಮ ಎಂದು ಹೆಸರು ಬಂದಿರುವ ಬಗ್ಗೆ ಐತಿಹ್ಯ ಹೀಗಿದೆ: ರಾವಣನ ತಪಸ್ಸಿಗೆ ಮೆಚ್ಚಿದ ಶಿವ, ಪಾರ್ವತಿ ಸಹಿತನಾಗಿ ಪ್ರತ್ಯಕ್ಷನಾಗುತ್ತಾನೆ. ಪಾರ್ವತಿಯ ಸೌಂದರ್ಯ ನೋಡಿದ ರಾವಣ ಆಕೆಯನ್ನೇ ಬೇಡುತ್ತಾನೆ. ಭಕ್ತನ ಆಸೆ ಈಡೇರಿಸುವುದು ಶಿವನ ಜಾಯಮಾನ. ಆದುದರಿಂದ ಆತ ಪಾರ್ವತಿಯನ್ನು ರಾವಣನ ಹಿಂದೆ ಕಳುಹಿಸುತ್ತಾನೆ.<br /> <br /> ಹಿಂದೆ ಬರುತ್ತಿರುವ ಪಾರ್ವತಿಯನ್ನು ರಾವಣ ಪ್ರತಿಸಲ ನೋಡಿದಾಗಲೂ ಆಕೆ ಕಾಳಿ, ಭದ್ರಕಾಳಿ, ಮಾರಮ್ಮ... ಈ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಭಯಗೊಂಡ ರಾವಣ, ಶಿವನ ಬಳಿ ಬಂದಾಗ ಶಿವನು ಪಾರ್ವತಿಯ ಕೈ ಹಿಡಿದುಕೊಂಡು ಹೋಗುವಂತೆ ತಿಳಿಸುತ್ತಾನೆ. ಆದರೆ ಪಾರ್ವತಿ ಪುನಃ ರಾವಣನಿಗೆ ಕೋಪ ಬರುವಂತೆ ನಡೆದುಕೊಳ್ಳುತ್ತಾಳೆ. ಸಿಟ್ಟಿಗೆದ್ದ ರಾವಣ ಅರಮನೆಗೆ ಕರೆದೊಯ್ಯುತ್ತಾನೆ.<br /> <br /> ಮಾರಿಯ ರೂಪದಲ್ಲಿ ಮೂಕವಾಗಿದ್ದ ಪಾರ್ವತಿಯನ್ನು ಗ್ರಾಮಸ್ಥರ ಮೂಲಕ ಒಲಿಸಿಕೊಳ್ಳಲು ರಾವಣ ಇಚ್ಛಿಸುತ್ತಾನೆ. ಆಕೆಯ ದೇಗುಲ ನಿರ್ಮಾಣ ಮಾಡಿ ಗ್ರಾಮಸ್ಥರಿಂದ ಪೂಜೆಗೆ ಒಳಪಡಿಸುತ್ತಾನೆ. ದೇವಾಲಯದಲ್ಲಿದ್ದ ದೇವಿ ಭಕ್ತರ ಪೂಜೆಗೆ ಒಲಿದು ಮಾತನಾಡುತ್ತಾಳೆ. ಇದೇ ಮುಂದೆ `ಮೂಗುಮಾರಮ್ಮ' ಆಯಿತು ಎನ್ನುತ್ತದೆ ಪುರಾಣ. 4 ದಿನ ನಡೆಯುವ ಜಾತ್ರೆಯಲ್ಲಿ ಮಹಾಪೂಜೆ, ಕೊಂಡ ಹಾಯುವುದು, ಪೂಜಾಕುಣಿತ, ಕರಗ ಹೀಗೆ ಅನೇಕ ವಿಧಿವಿಧಾನಗಳು ನಡೆಯುತ್ತವೆ.<br /> <br /> ಹೀಗೆ ಬನ್ನಿ: ಚನ್ನಪಟ್ಟಣದಿಂದ ಬರುವುದಾದರೆ, ಸಾತನೂರು-ಚನ್ನಪಟ್ಟಣ ರಸ್ತೆಯಲ್ಲಿ (ಹೊಂಗನೂರಿನಲ್ಲಿ ಎಡಕ್ಕೆ) ಸುಮಾರು 15 ಕಿ.ಮೀ. ಕ್ರಮಿಸಬೇಕು. ಕನಕಪುರ ರಸ್ತೆಯ ಕಡೆಯಿಂದ ಬರುವುದಾದರೆ, ಸಾತನೂರಿನಿಂದ ಚನ್ನಪಟ್ಟಣ-ಸಾತನೂರು ರಸ್ತೆಯಲ್ಲಿ ಸುಮಾರು 8 ಕಿ.ಮೀ. ದೂರದಲ್ಲಿದೆ.<br /> <br /> ಇಲ್ಲಿಗೆ ಬಂದರೆ, ಸಮುದ್ರಮಟ್ಟದಿಂದ ಸುಮಾರು 3,600 ಅಡಿ ಎತ್ತರವಿರುವ ಬೃಹತ್ ಏಕಶಿಲಾ ಬೆಟ್ಟ ಶ್ರೀಗವಿಂಗಸ್ವಾಮಿ ಬೆಟ್ಟ' ವನ್ನೂ ನೋಡಬಹುದು. ಚಾರಣಿಗರಿಗೂ ಇದು ಹೇಳಿಮಾಡಿಸಿದಂತಿದೆ. ಇದಲ್ಲದೆ, ಕಬ್ಬಾಳಮ್ಮ ದೇವಾಲಯ, ಕಬ್ಬಾಳು ದುರ್ಗವನ್ನೂ ನೋಡಬಹುದು. ಹಾಗೆಯೇ ಪ್ರಸಿದ್ಧ ನಿಸರ್ಗಧಾಮಗಳಾದ ಮೇಕೆದಾಟು-ಸಂಗಮ ಮತ್ತು ವನ್ಯಧಾಮವೆನಿಸಿದ ಮುತ್ತತ್ತಿ ಸವಿ ಸವಿಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>