<p>ಸಾವಿರ ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಮಹಾಕ್ಷೇತ್ರ ವಸಂತಪುರ. ಬೆಂಗಳೂರಿನಿಂದ 1-2 ಕಿ.ಮೀ. ದೂರ ಇರುವ ಈ ಕ್ಷೇತ್ರ ಮಾಂಡವ್ಯ ಮಹರ್ಷಿಗಳಿಂದ ಪ್ರತಿಷ್ಠಾಪನೆಗೊಂಡಿದೆ. ಸ್ವಾಮಿಯ ದೇಗುಲದಲ್ಲೀಗ ದೀಪಾವಳಿ ಸಂಭ್ರಮ.<br /> <br /> ಹೆಚ್ಚಿನ ದೇಗುಲಗಳಲ್ಲಿ ವೆಂಕಟೇಶ್ವರ ಬಲಗೈ ಚಾಚಿ ನಿಂತಿದ್ದರೆ, ಇಲ್ಲಿ ಮಾತ್ರ ಆತ ಅಭಯ ಹಸ್ತ ತೋರಿ ನಿಂತಿರುವುದು ವಿಶೇಷ. ವಲ್ಲಭರಾಯ ಸ್ವಾಮಿ ಶ್ರೀದೇವಿ, ಭೂದೇವಿಯೊಡನೆ ವಸಂತ ಸ್ನಾನವನ್ನು ಮಾಡಿರುವುದರಿಂದ ಈ ಸ್ಥಳಕ್ಕೆ ವಸಂತಪುರವೆಂದು ಹೆಸರು.<br /> <br /> ಮದುವೆ ಆಗದೆ ಇರುವವರು ಈ ದೇವರ ಹತ್ತಿರ ಕಂಕಣ ಕಟ್ಟಿಸಿಕೊಂಡರೆ ೪೮ ದಿನಗಳಲ್ಲಿ ಮದುವೆ ಆಗುತ್ತದೆ. ಶ್ರೀ ಗೋಪಾಲಕೃಷ್ಣನಿಗೆ ರೋಹಿಣಿ ನಕ್ಷತ್ರದಲ್ಲಿ ಹದಿನಾರು ವಾರಗಳು ಹಾಲಿನ ಅಭಿಷೇಕ ಮಾಡಿಸಿ ಆ ತೀರ್ಥವನ್ನು ಸೇವಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.<br /> <br /> ಈ ಸ್ಥಳದ ಪುರಾಣವನ್ನು ಯಾರು ಓದುತ್ತಾರೋ, ಕೇಳುತ್ತಾರೋ ಅವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯ, ಭಾಗ್ಯ, ಕೀರ್ತಿ ಎಲ್ಲವೂ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.</p>.<p><strong>ಹುತ್ತದ ನಡುವೆ ಗಣಪ</strong><br /> 50 ವರ್ಷ ಹಳೆಯದಾದ ಅರಳಿ ಮರದ ನಡುವೆ ಒಂದು ಹುತ್ತ. ಈ ನಾಗದೇವತೆಯ ಪ್ರೇರಣೆಯಿಂದ ಪ್ರತಿಷ್ಠಾಪನೆಗೊಂಡಿದೆ ಅಪೂರ್ವದ ಅಭಯ ಗಣಪತಿ ದೇಗುಲ. ಬೆಂಗಳೂರಿನ ಜಯನಗರದಲ್ಲಿ ಶೃಂಗೇರಿ ಮಠದ ಶಿವ ಸ್ವಾಮಿ ಗಳಿಂದ ಪ್ರತಿಷ್ಠಾಪನೆಗೊಂಡಿರುವ ಈ ದೇಗುಲದಲ್ಲಿ ದೀಪಾವಳಿ ಆಚರಣೆಯ ವಿಶೇಷವಿದೆ.<br /> <br /> ಪ್ರತಿ ನಿತ್ಯ ಅಭಿಷೇಕ, ಶುಕ್ರವಾರ ಶನಿವಾರ ಸಹಸ್ರನಾಮ, ಪೂಜೆ, ಮಲ್ಲಿಗೆ ಅಲಂಕಾರ ಇಲ್ಲಿಯ ವೈಶಿಷ್ಟ್ಯ. ಪ್ರತಿ ಅಮಾವಾಸ್ಯೆ ದುರ್ಗಾ ಹೋಮ ನಡೆಯುತ್ತದೆ. ಆ ದಿನ 3 ರಿಂದ 4 ಸಾವಿರ ಜನಗಳಿಗೆ ಅನ್ನದಾನವಿರುತ್ತದೆ. ಗಣಪತಿಯ ಸನಿಹದಲ್ಲಿದೆ ನಿಮಿಷಾಂಬ ದೇವಿ ವಿಗ್ರಹವಿದೆ. ಹಣೆಯಲ್ಲಿ ಶಿವಲಿಂಗ ಇರುವುದು ಈ ದೇವಿಯ ವಿಶೇಷತೆ. ಪ್ರತಿ ಮಂಗಳವಾರ ಶುಕ್ರವಾರ ದುರ್ಗಾಸಪ್ತಶತಿಯ ಪಾರಾಯಣ, ನಿಂಬೆಹಣ್ಣಿನ ದೀಪಸೇವೆ ಇರುತ್ತವೆ.<br /> <br /> ಸಂಪರ್ಕಕ್ಕೆ- ನರಸಿಂಹಮೂರ್ತಿ: 94801 22433<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾವಿರ ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಮಹಾಕ್ಷೇತ್ರ ವಸಂತಪುರ. ಬೆಂಗಳೂರಿನಿಂದ 1-2 ಕಿ.ಮೀ. ದೂರ ಇರುವ ಈ ಕ್ಷೇತ್ರ ಮಾಂಡವ್ಯ ಮಹರ್ಷಿಗಳಿಂದ ಪ್ರತಿಷ್ಠಾಪನೆಗೊಂಡಿದೆ. ಸ್ವಾಮಿಯ ದೇಗುಲದಲ್ಲೀಗ ದೀಪಾವಳಿ ಸಂಭ್ರಮ.<br /> <br /> ಹೆಚ್ಚಿನ ದೇಗುಲಗಳಲ್ಲಿ ವೆಂಕಟೇಶ್ವರ ಬಲಗೈ ಚಾಚಿ ನಿಂತಿದ್ದರೆ, ಇಲ್ಲಿ ಮಾತ್ರ ಆತ ಅಭಯ ಹಸ್ತ ತೋರಿ ನಿಂತಿರುವುದು ವಿಶೇಷ. ವಲ್ಲಭರಾಯ ಸ್ವಾಮಿ ಶ್ರೀದೇವಿ, ಭೂದೇವಿಯೊಡನೆ ವಸಂತ ಸ್ನಾನವನ್ನು ಮಾಡಿರುವುದರಿಂದ ಈ ಸ್ಥಳಕ್ಕೆ ವಸಂತಪುರವೆಂದು ಹೆಸರು.<br /> <br /> ಮದುವೆ ಆಗದೆ ಇರುವವರು ಈ ದೇವರ ಹತ್ತಿರ ಕಂಕಣ ಕಟ್ಟಿಸಿಕೊಂಡರೆ ೪೮ ದಿನಗಳಲ್ಲಿ ಮದುವೆ ಆಗುತ್ತದೆ. ಶ್ರೀ ಗೋಪಾಲಕೃಷ್ಣನಿಗೆ ರೋಹಿಣಿ ನಕ್ಷತ್ರದಲ್ಲಿ ಹದಿನಾರು ವಾರಗಳು ಹಾಲಿನ ಅಭಿಷೇಕ ಮಾಡಿಸಿ ಆ ತೀರ್ಥವನ್ನು ಸೇವಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.<br /> <br /> ಈ ಸ್ಥಳದ ಪುರಾಣವನ್ನು ಯಾರು ಓದುತ್ತಾರೋ, ಕೇಳುತ್ತಾರೋ ಅವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯ, ಭಾಗ್ಯ, ಕೀರ್ತಿ ಎಲ್ಲವೂ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.</p>.<p><strong>ಹುತ್ತದ ನಡುವೆ ಗಣಪ</strong><br /> 50 ವರ್ಷ ಹಳೆಯದಾದ ಅರಳಿ ಮರದ ನಡುವೆ ಒಂದು ಹುತ್ತ. ಈ ನಾಗದೇವತೆಯ ಪ್ರೇರಣೆಯಿಂದ ಪ್ರತಿಷ್ಠಾಪನೆಗೊಂಡಿದೆ ಅಪೂರ್ವದ ಅಭಯ ಗಣಪತಿ ದೇಗುಲ. ಬೆಂಗಳೂರಿನ ಜಯನಗರದಲ್ಲಿ ಶೃಂಗೇರಿ ಮಠದ ಶಿವ ಸ್ವಾಮಿ ಗಳಿಂದ ಪ್ರತಿಷ್ಠಾಪನೆಗೊಂಡಿರುವ ಈ ದೇಗುಲದಲ್ಲಿ ದೀಪಾವಳಿ ಆಚರಣೆಯ ವಿಶೇಷವಿದೆ.<br /> <br /> ಪ್ರತಿ ನಿತ್ಯ ಅಭಿಷೇಕ, ಶುಕ್ರವಾರ ಶನಿವಾರ ಸಹಸ್ರನಾಮ, ಪೂಜೆ, ಮಲ್ಲಿಗೆ ಅಲಂಕಾರ ಇಲ್ಲಿಯ ವೈಶಿಷ್ಟ್ಯ. ಪ್ರತಿ ಅಮಾವಾಸ್ಯೆ ದುರ್ಗಾ ಹೋಮ ನಡೆಯುತ್ತದೆ. ಆ ದಿನ 3 ರಿಂದ 4 ಸಾವಿರ ಜನಗಳಿಗೆ ಅನ್ನದಾನವಿರುತ್ತದೆ. ಗಣಪತಿಯ ಸನಿಹದಲ್ಲಿದೆ ನಿಮಿಷಾಂಬ ದೇವಿ ವಿಗ್ರಹವಿದೆ. ಹಣೆಯಲ್ಲಿ ಶಿವಲಿಂಗ ಇರುವುದು ಈ ದೇವಿಯ ವಿಶೇಷತೆ. ಪ್ರತಿ ಮಂಗಳವಾರ ಶುಕ್ರವಾರ ದುರ್ಗಾಸಪ್ತಶತಿಯ ಪಾರಾಯಣ, ನಿಂಬೆಹಣ್ಣಿನ ದೀಪಸೇವೆ ಇರುತ್ತವೆ.<br /> <br /> ಸಂಪರ್ಕಕ್ಕೆ- ನರಸಿಂಹಮೂರ್ತಿ: 94801 22433<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>