ವಿಜಾಪುರ ಜಿಲ್ಲೆಯ ಕಡಣಿ ಗ್ರಾಮದ ಗ್ರಾಮ ದೇವರಾದ ಶ್ರೀ ಭೋಗೇಶ್ವರ ಜಾತ್ರೆಯು ಇದೇ ಏಪ್ರಿಲ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ರಥೋತ್ಸವ, ಪಲ್ಲಕ್ಕಿ ಮೆರವಣಿಗೆ, ಕುಂಭ, ಹೀಗೆ ಹಲವು ಕಾರ್ಯಕ್ರಮಗಳು ಜರುಗಲಿವೆ.
18ರಂದು ಕುಂಭಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಅನ್ನ ಸಂತರ್ಪಣೆ; 19ರ ರಾತ್ರಿ ಭೋಗೇಶ್ವರ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಜಾತ್ರೆಯ ವಿಶೇಷ. ಗುಲಬರ್ಗಾ ಜಿಲ್ಲೆಯ ಕೆಂಬಾವಿಯಲ್ಲಿ 12ನೇ ಶತಮಾನದಲ್ಲಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ್ದವರು ಶರಣ ಭೋಗಣ್ಣ. ಜಾತಿ, ಕಂದಾಚಾರ, ಮೂಢನಂಬಿಕೆಯನ್ನು ಮೀರಿ ನಿಂತ ಪರಿಣಾಮ ಇವರನ್ನು ರಾಜ ಗಡಿಪಾರು ಮಾಡುತ್ತಾನೆ.