ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಮಾವೇಶದಲ್ಲಿ ನರೇಂದ್ರ ಮೋದಿ: ಸರ್ಕಾರದ ಸಂಕಲ್ಪಗಳನ್ನು ಈಡೇರಿಸುವ ವಿಶ್ವಾಸ ನನ್ನಲ್ಲಿದೆ
LIVE

ಪ್ರಧಾನಿ ಮೋದಿ ಗುರುವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯ ಗದ್ಧುಗೆ ದರ್ಶನ ಪಡೆದರು. ನಂತರ ಮಠದ ಮಕ್ಕಳ ಜತೆ ಸಂವಾದ ನಡೆಸಿ ಸಿದ್ಧಲಿಂಗ ಶ್ರೀಗಳಿಂದ ಆಶೀರ್ವಾದ ಪಡೆದರು. ಡಾ.ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮತ್ತು ಮಠದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಟ್ಟ ಅವರು ನೇರವಾಗಿ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕೃಷಿ ಕರ್ಮಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡರು. ಈ ಎರಡೂ ಕಾರ್ಯಕ್ರಮಗಳಲ್ಲಿ ಮೋದಿ ಏನು ಮಾತನಾಡಿದರು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
Last Updated 2 ಜನವರಿ 2020, 13:01 IST
ಅಕ್ಷರ ಗಾತ್ರ
10:5902 Jan 2020

ಸಂಕಲ್ಪಗಳನ್ನು ಈಡೇರಿಸುತ್ತೇವೆ.

ನಾವು ನೀಡಿರುವ ಎಲ್ಲ ಸಂಕಲ್ಪಗಳನ್ನೂ ಈಡೇರಿಸುವ ವಿಶ್ವಾಸ ನನ್ನಲ್ಲಿದೆ. ‘ಕೃಷಿ ಕರ್ಮಣ ಪ್ರಶಸ್ತಿ’ ಪಡೆದ ಎಲ್ಲ ರೈತರಿಗೂ ಧನ್ಯವಾದಗಳು. ಕರ್ನಾಟಕದ ರೈತರಿಗೆಲ್ಲ ಸಂಕ್ರಾಂತಿಯ ಶುಭಾಶಯಗಳು. 

10:5402 Jan 2020

ಜನ ಸಂಕಷ್ಟ ಪರಿಹರಿಸಲು ಒತ್ತು

ಕರ್ನಾಟಕದಲ್ಲಿ ಜಲ ಸಂಕಷ್ಟ ಎದುರಾಗಿದೆ. ಬೇರೆ ರಾಜ್ಯಗಳಲ್ಲೂ ಇದರ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಅಟಲ್‌ ಭೂ ಜಲ ಮಿಷನ್‌ ಅನ್ನು ಪರಿಚಯಿಸಲಾಗಿದೆ. ಏಳು ರಾಜ್ಯಗಳಲ್ಲಿ ಅಂತರ್ಜಲ ಮಟ್ಟವನ್ನು ಮೇಲೆತ್ತುವ ಕಾರ್ಯ ಈ ಯೋಜನೆ ಅಡಿಯಲ್ಲಿ ಆಗಲಿದೆ. 

10:4902 Jan 2020

ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ

ಮೀನುಗಾರಿಕೆ ಹೆಚ್ಚಿಸಲು ಅವಕಾಶಗಳಿವೆ. ಅದಕ್ಕಾಗಿಯೇ ಮೂರು ಸ್ತರದ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಗ್ರಾಮಗಳಲ್ಲಿ ಹೆಚ್ಚಿನ ಆದ್ಯತೆ ನೀಡುವುದು, ಆರ್ಥಿಕ ನೆರವು ನೀಡುವುದು, ನೀಲಿ ಕ್ರಾಂತಿ ಮೂಲಕ ಮೂಲ ಸೌಕರ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಮೂಲಸೌಕರ್ಯ ಕಲ್ಪಿಸಲು 7 ಸಾವಿರ ಕೋಟಿ ಒದಗಿಸಲಾಗುತ್ತಿದೆ. 

ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅನ್ನೂ ವಿತರಣೆ ಮಾಡಲಾಗುತ್ತಿದೆ. 

ಸಾಗರಾಳದ ಮೀನುಗಾರಿಕೆಗೆ ನೆರವಾಗಲು ತಂತ್ರಜ್ಙಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇಸ್ರೋ ಇದಕ್ಕೆ ನೆರವು ನೀಡುತ್ತಿದೆ. ದೋಣಿಗಳ ಮೇಲ್ದರ್ಜೆಗೆ 2 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. 

10:4802 Jan 2020

ಕಾಫಿ ಬೆಳೆ ಕರ್ನಾಟಕದ ಹೆಗ್ಗುರುತು

ಕಾಫಿ ಬೆಳೆ ಕರ್ನಾಟಕದ ಹೆಗ್ಗುರುತು. ಕಾಫಿ ಬೆಳೆಯ ಪ್ಯಾಕಿಂಗ್‌ನಿಂದ ಹಿಡಿದು ಮಾರುಕಟ್ಟೆ ವರೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಾ ಬಂದಿದೆ. 

10:4702 Jan 2020

ರಬ್ಬರ್‌ ಬೆಳೆಗೆ ಪ್ರೋತ್ಸಾಹ

ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿಯಲ್ಲಿ ರಬ್ಬರ್‌ ಬೆಳೆಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ರಬ್ಬರ್‌ ಬೆಳೆ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರವೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. 

10:4202 Jan 2020

ಅರಿಶಿಣದ ಬೆಳೆ ಮೇಲೆ ಸಂಶೋಧನೆ

ಅರಿಶಿಣದ ಉತ್ಪಾದನೆ ಐದು ವರ್ಷಗಳಲ್ಲಿ ಹೆಚ್ಚಾಗಿದೆ. ಈ ಬೆಳೆಯ ಮೇಲೆ ಸಂಶೋಧನೆಯನ್ನೂ ಆರಂಭಿಸಿದ್ದೇವೆ. ತೆಲಂಗಾಣ ಅರಿಶಿನದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕವೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಉತ್ಪಾದನೆ ಮಾಡಿದೆ. 

10:4102 Jan 2020

19 ಸಾವಿರ ಕೋಟಿ ರೂಪಾಯಿಗಳ ಮಸಾಲೆ ಪದಾರ್ಥಗಳ ರಫ್ತು

ಸಾಂಬಾರ ಪದಾರ್ಥಗಳ ರಫ್ತಿನಲ್ಲಿ ಭಾರತ ಸಾಧನೆ ಮಾಡಿದೆ. 19 ಸಾವಿರ ಕೋಟಿ ರೂಪಾಯಿಗಳಷ್ಟು ಮಸಾಲೆ ಪದಾರ್ಥಗಳನ್ನು ಭಾರತ ಇಂದು ರಫ್ತು ಮಾಡಿದೆ. 

10:4402 Jan 2020

ತೆಂಗು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗಬೇಕು.

ದಕ್ಷಿಣ ಭಾರತದಲ್ಲಿ ತೆಂಗು, ಕಾಫಿ, ಗೋಡಂಬಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತೆಂಗು ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಗೋಡಂಬಿ ಹೆಚ್ಚು ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. 

10:3902 Jan 2020

ಬೆಳೆಗಳಿಗೆ ಕ್ಲಸ್ಟರ್‌ ನಿರ್ಮಾಣ

ಬೆಳಗಾವಿ ದಾಳಿಂಬೆ, ಚಿಕ್ಕಬಳ್ಳಾಪುರ ಬೆಂಗಳೂರಿನ ಗುಲಾಬಿ, ಚಿಕ್ಕಮಗಳೂರಿನ ಕಾಫಿ ಬೆಳೆಯ ಕ್ಲಸ್ಟರ್‌ ನಿರ್ಮಾಣ ಮಾಡುವ ಉದ್ದೇಶವಿದೆ. 

10:3702 Jan 2020

ದಕ್ಷಿಣದ ಶಕ್ತಿಯಿಂದ ಹೊಸ ಭಾರತ ನಿರ್ಮಾಣ

ಆಹಾರ ಪದಾರ್ಥಗಳ ರಫ್ತಿನಲ್ಲಿ ದಕ್ಷಿಣ ಭಾರತ ಹಿಂದಿನಿಂದಲೂ ಶಕ್ತಿ ಹೊಂದಿದೆ. ಇದರ ಆಧಾರದ ಮೇಲೆ ಹೊಸ ದೇಶ (New India) ನಿರ್ಮಾಣ ಮಾಡುತ್ತೇವೆ. – ಮೋದಿ