<p>ಕೆಲವರು ವಿಭಿನ್ನ ರೀತಿಯ ಹವ್ಯಾಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಏನನ್ನಾದರೂ ವಿಶಿಷ್ಟ ವಿನೂತನವಾಗಿ ಮಾಡಿ ಸಾಧಿಸಬೇಕೆಂಬ ಛಲ ಹೊಂದಿರುತ್ತಾರೆ. ಅದೇ ರೀತಿ ಬಹುಮುಖಿ ದೃಶ್ಯ ಸಂಸ್ಕೃತಿಯಲ್ಲಿ ತೊಡಗಿಸಿಕೊಂಡಿರುವ ಕಲಾವಿದ ಸುಪ್ರೀತ್ ಅಡಿಗ.</p>.<p>ಸುಪ್ರೀತ್ ಕರಾವಳಿಯ ಬೈಂದೂರಿನವರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>.<p>ಸುಪ್ರೀತ್ ಸೆರೆಹಿಡಿದಿರುವ ಛಾಯಾಚಿತ್ರಗಳು ವಿಭಿನ್ನ ಅನುಭವ ಕೊಡುತ್ತವೆ. ಈ ಛಾಯಾಚಿತ್ರಗಳು ವಿಭಿನ್ನವಾಗಿದ್ದು, ಥಟ್ಟನೆ ನೋಡುಗರ ಗಮನ ಸೆಳೆಯುತ್ತವೆ. ಇವರ ಛಾಯಾಚಿತ್ರಗಳಲ್ಲಿ ಸಹಜತೆ, ಸೌಂದರ್ಯ ಎದ್ದು ಕಾಣುತ್ತದೆ. ಈ ಚಿತ್ರಗಳನ್ನು ವೀಕ್ಷಿಸಿದವರಿಗೆ ನೈಜವಾಗಿಯೂ ಆ ತಾಣದಲ್ಲಿಯೇ ವಿಹರಿಸುತ್ತಿದ್ದೇವೆನೋ ಎಂಬ ಭಾವ ಮೂಡದೇ ಇರದು.</p>.<p>ಪ್ರಾಕೃತಿಕ ಬೆಳಕು ರೂಪಗಳು, ಬಣ್ಣಗಳು ಅದರ ಸಂಯೋಜನೆ ಇವರ ಛಾಯಾಚಿತ್ರಗಳಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಅವರ ಆಯ್ದ ಛಾಯಾಚಿತ್ರಗಳ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.</p>.<p>****<br /> <strong>ರೀಫೋಕಲ್ ಛಾಯಾಚಿತ್ರ ಪ್ರದರ್ಶನ: ಸ್ಥಳ–ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಜೂನ್ 7ರಿಂದ 11ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ, ಪ್ರವೇಶ ಉಚಿತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವರು ವಿಭಿನ್ನ ರೀತಿಯ ಹವ್ಯಾಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಏನನ್ನಾದರೂ ವಿಶಿಷ್ಟ ವಿನೂತನವಾಗಿ ಮಾಡಿ ಸಾಧಿಸಬೇಕೆಂಬ ಛಲ ಹೊಂದಿರುತ್ತಾರೆ. ಅದೇ ರೀತಿ ಬಹುಮುಖಿ ದೃಶ್ಯ ಸಂಸ್ಕೃತಿಯಲ್ಲಿ ತೊಡಗಿಸಿಕೊಂಡಿರುವ ಕಲಾವಿದ ಸುಪ್ರೀತ್ ಅಡಿಗ.</p>.<p>ಸುಪ್ರೀತ್ ಕರಾವಳಿಯ ಬೈಂದೂರಿನವರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>.<p>ಸುಪ್ರೀತ್ ಸೆರೆಹಿಡಿದಿರುವ ಛಾಯಾಚಿತ್ರಗಳು ವಿಭಿನ್ನ ಅನುಭವ ಕೊಡುತ್ತವೆ. ಈ ಛಾಯಾಚಿತ್ರಗಳು ವಿಭಿನ್ನವಾಗಿದ್ದು, ಥಟ್ಟನೆ ನೋಡುಗರ ಗಮನ ಸೆಳೆಯುತ್ತವೆ. ಇವರ ಛಾಯಾಚಿತ್ರಗಳಲ್ಲಿ ಸಹಜತೆ, ಸೌಂದರ್ಯ ಎದ್ದು ಕಾಣುತ್ತದೆ. ಈ ಚಿತ್ರಗಳನ್ನು ವೀಕ್ಷಿಸಿದವರಿಗೆ ನೈಜವಾಗಿಯೂ ಆ ತಾಣದಲ್ಲಿಯೇ ವಿಹರಿಸುತ್ತಿದ್ದೇವೆನೋ ಎಂಬ ಭಾವ ಮೂಡದೇ ಇರದು.</p>.<p>ಪ್ರಾಕೃತಿಕ ಬೆಳಕು ರೂಪಗಳು, ಬಣ್ಣಗಳು ಅದರ ಸಂಯೋಜನೆ ಇವರ ಛಾಯಾಚಿತ್ರಗಳಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಅವರ ಆಯ್ದ ಛಾಯಾಚಿತ್ರಗಳ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.</p>.<p>****<br /> <strong>ರೀಫೋಕಲ್ ಛಾಯಾಚಿತ್ರ ಪ್ರದರ್ಶನ: ಸ್ಥಳ–ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಜೂನ್ 7ರಿಂದ 11ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ, ಪ್ರವೇಶ ಉಚಿತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>