<p>ಲಾಲ್ಬಾಗ್ ಅಸಂಖ್ಯ ಸಸ್ಯಗಳ ಆಗರ. ಈ ಸಸ್ಯೋದ್ಯಾನಕ್ಕೆ ಆಸ್ಟ್ರೇಲಿಯಾದ ನೀಲಗಿರಿಯನ್ನು 1859ರಲ್ಲಿ ತಂದು ನೆಡಲಾಯಿತು.</p>.<p>ಮಹಾಮಾರಿ ಪ್ಲೇಗ್ ಬೆಂಗಳೂರಿಗೆ ಕಾಲಿಟ್ಟು ನೂರಾರು ಜನರನ್ನು 1898ರಲ್ಲಿ ಬಲಿ ತೆಗೆದುಕೊಂಡಿತ್ತು. ಇಕ್ಕಟ್ಟಾದ ರಸ್ತೆ. ಅನಾರೋಗ್ಯಕರ ವಾಸಸ್ಥಳಗಳಿಂದ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಮನಗಂಡ ಆಗಿನ ಸರ್ಕಾರ ಬೆಂಗಳೂರಿನಲ್ಲಿ ಹೊಸ ಬಡಾವಣೆಗಳನ್ನು ಪ್ರಾರಂಭಿಸಿತು.</p>.<p>ಬೆಂಗಳೂರು ಕಾರ್ಪೊರೇಷನ್ ಎರಡು ಮುನ್ಸಿಪಾಲಿಟಿಗಳನ್ನು ಸೇರಿಸಿದ್ದರಿಂದ ಅಸ್ತಿತ್ವಕ್ಕೆ ಬಂತು (1949) ಆಗ 122 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಪೊರೇಷನ್ ಕಾರ್ಯ ನಿರ್ವಹಣೆ ಮಾಡುತ್ತಿತ್ತು.</p>.<p>ಸ್ವಾಮಿ ವಿವೇಕಾನಂದರು 1882ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು.</p>.<p>ಕಬ್ಬನ್ ರಸ್ತೆಯಲ್ಲಿರುವ ಬಿ.ಆರ್.ವಿ. ಕಟ್ಟಡ ಬ್ರಿಟಿಷ್ ಆಡಳಿತ ಕಾಲದಲ್ಲಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಮನರಂಜನಾ ತಾಣವಾಗಿತ್ತು. ನಂತರದ ದಿನಗಳಲ್ಲಿ ಚಲನಚಿತ್ರಗಳ ಪ್ರದರ್ಶನವನ್ನೂ ಆರಂಭಿಸಲಾಯಿತು. ಪ್ರಸ್ತುತ ಆ ಕಲ್ಲಿನ ಕಟ್ಟಡವನ್ನು ಮಿಲಿಟರಿ ಕ್ಯಾಂಟಿನ್ ಆಗಿ ಉಪಯೋಗಿಸಲಾಗುತ್ತಿದೆ.</p>.<p>ಗುಡ್ ಷಪರ್ಡ್ ದಾದಿಯರು 1886ರಲ್ಲಿ ಸೆಂಟ್ ಮಾರ್ಥಾಸ್ ಆಸ್ಪತ್ರೆ ಆರಂಭಿಸಿದಾಗ ಮೈಸೂರು ಅರಸರು ಆಸ್ಪತ್ರೆಗೆ ಭೂಮಿಯನ್ನು ಉಚಿತವಾಗಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಾಲ್ಬಾಗ್ ಅಸಂಖ್ಯ ಸಸ್ಯಗಳ ಆಗರ. ಈ ಸಸ್ಯೋದ್ಯಾನಕ್ಕೆ ಆಸ್ಟ್ರೇಲಿಯಾದ ನೀಲಗಿರಿಯನ್ನು 1859ರಲ್ಲಿ ತಂದು ನೆಡಲಾಯಿತು.</p>.<p>ಮಹಾಮಾರಿ ಪ್ಲೇಗ್ ಬೆಂಗಳೂರಿಗೆ ಕಾಲಿಟ್ಟು ನೂರಾರು ಜನರನ್ನು 1898ರಲ್ಲಿ ಬಲಿ ತೆಗೆದುಕೊಂಡಿತ್ತು. ಇಕ್ಕಟ್ಟಾದ ರಸ್ತೆ. ಅನಾರೋಗ್ಯಕರ ವಾಸಸ್ಥಳಗಳಿಂದ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಮನಗಂಡ ಆಗಿನ ಸರ್ಕಾರ ಬೆಂಗಳೂರಿನಲ್ಲಿ ಹೊಸ ಬಡಾವಣೆಗಳನ್ನು ಪ್ರಾರಂಭಿಸಿತು.</p>.<p>ಬೆಂಗಳೂರು ಕಾರ್ಪೊರೇಷನ್ ಎರಡು ಮುನ್ಸಿಪಾಲಿಟಿಗಳನ್ನು ಸೇರಿಸಿದ್ದರಿಂದ ಅಸ್ತಿತ್ವಕ್ಕೆ ಬಂತು (1949) ಆಗ 122 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಪೊರೇಷನ್ ಕಾರ್ಯ ನಿರ್ವಹಣೆ ಮಾಡುತ್ತಿತ್ತು.</p>.<p>ಸ್ವಾಮಿ ವಿವೇಕಾನಂದರು 1882ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು.</p>.<p>ಕಬ್ಬನ್ ರಸ್ತೆಯಲ್ಲಿರುವ ಬಿ.ಆರ್.ವಿ. ಕಟ್ಟಡ ಬ್ರಿಟಿಷ್ ಆಡಳಿತ ಕಾಲದಲ್ಲಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಮನರಂಜನಾ ತಾಣವಾಗಿತ್ತು. ನಂತರದ ದಿನಗಳಲ್ಲಿ ಚಲನಚಿತ್ರಗಳ ಪ್ರದರ್ಶನವನ್ನೂ ಆರಂಭಿಸಲಾಯಿತು. ಪ್ರಸ್ತುತ ಆ ಕಲ್ಲಿನ ಕಟ್ಟಡವನ್ನು ಮಿಲಿಟರಿ ಕ್ಯಾಂಟಿನ್ ಆಗಿ ಉಪಯೋಗಿಸಲಾಗುತ್ತಿದೆ.</p>.<p>ಗುಡ್ ಷಪರ್ಡ್ ದಾದಿಯರು 1886ರಲ್ಲಿ ಸೆಂಟ್ ಮಾರ್ಥಾಸ್ ಆಸ್ಪತ್ರೆ ಆರಂಭಿಸಿದಾಗ ಮೈಸೂರು ಅರಸರು ಆಸ್ಪತ್ರೆಗೆ ಭೂಮಿಯನ್ನು ಉಚಿತವಾಗಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>