<p>ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳ ಪೈಕಿ ಸಂಗೀತ ಕಾರ್ಯಕ್ರಮಗಳೇ ಹೆಚ್ಚು ಮನ್ನಣೆ ಪಡೆದಿವೆ. ಪುಟ್ಟ ಮಕ್ಕಳು ವೇದಿಕೆ ಮೇಲೆ ನಿಂತು ನಿರ್ಭೀತವಾಗಿ, ಸುಲಲಿತವಾಗಿ ಹಾಗೂ ತಮ್ಮ ಸುಮಧುರ ಕಂಠಸಿರಿಯಿಂದ ಹಾಡುವ ಮೂಲಕ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ.</p>.<p>‘ಅರೇ, ಆ ಮಗು ಎಷ್ಟು ಚೆಂದವಾಗಿ ಹಾಡುತ್ತೆ. ಇಷ್ಟು ಚಿಕ್ಕ ವಯಸ್ಸಿಗೆ ಇದು ಹೇಗೆ ಸಾಧ್ಯ’ ಎಂದು ನೋಡುಗರಲ್ಲಿ ಪ್ರಶ್ನೆ ಮೂಡುವುದು ಸಹಜ. ಅಂತಹ ಕೆಲ ಮಕ್ಕಳ ಹಾಡುಗಾರಿಕೆಯ ಕೌಶಲದ ಹಿಂದೆ ಈ ಗಾಯಕನ ಪರಿಶ್ರಮ ಅಡಗಿದೆ.</p>.<p>‘ಸೃಜನ ಸಂಗೀತ ಶಾಲೆ’ ಸ್ಥಾಪಿಸಿರುವ ನರಹರಿ ದೀಕ್ಷಿತ್ ಉತ್ತಮ ಗಾಯಕ. ಈವರೆಗೆ ಸಾವಿರಾರು ಮಕ್ಕಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ರಿಯಾಲಿಟಿ ಶೋಗಳಿಗೆ ಮಕ್ಕಳನ್ನು ರೂಪಿಸುವುದಕ್ಕೆ ಇವರ ಶಾಲೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಇವರನ್ನು ರಿಯಾಲಿಟಿ ಗುರು ಎಂದೇ ಮಕ್ಕಳು ಕರೆಯುತ್ತಾರೆ.</p>.<p>ಶಿವಮೊಗ್ಗದ ಮಂಚಾಲೆಯವರಾದ ನರಹರಿ, ಎಲ್ಎಲ್ಬಿ ಪದವೀಧರು. ಸಂಗೀತದಲ್ಲಿಯೇ ಬದುಕು ಕಂಡು ಕೊಳ್ಳಬೇಕು ಎಂದು ನಿರ್ಧರಿಸಿ, 1995ರಲ್ಲಿ ‘ಸೃಜನ ಸಂಗೀತ ಶಾಲೆ’ ಆರಂಭಿಸಿದರು. ಪ್ರಾರಂಭದಲ್ಲಿ ಶಾಲೆಗೆ ಸೇರಿದ್ದು ಬೆರಳೆಣಿಕೆಯಷ್ಟೇ ಮಕ್ಕಳಾದರು ಇಂದು ಆ ಶಾಲೆ ರಾಜ್ಯದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದೆ.</p>.<p>ಇಲ್ಲಿ ತರಬೇತಿ ಪಡೆದ ನೂರಾರು ಮಕ್ಕಳು ಟಿವಿಗಳ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ನೇತೃತ್ವದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ, ವಿದೇಶದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಗಾಯನ ಪ್ರದರ್ಶನ ನೀಡಿದ್ದಾರೆ.</p>.<p>ಸದ್ಯ ನರಹರಿ ದೀಕ್ಷಿತ್ ಅವರ ಸಂಗೀತ ಸೇವೆ ಗುರುತಿಸಿರುವ ಅಖಿಲ ಹವ್ಯಕ ಮಹಾಸಭಾವು ಅವರನ್ನು ‘ಹವ್ಯಕ ಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಇದೇ 15ರಂದು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಅಂದು ನರಹರಿ ಅವರನ್ನು ಗೌರವಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳ ಪೈಕಿ ಸಂಗೀತ ಕಾರ್ಯಕ್ರಮಗಳೇ ಹೆಚ್ಚು ಮನ್ನಣೆ ಪಡೆದಿವೆ. ಪುಟ್ಟ ಮಕ್ಕಳು ವೇದಿಕೆ ಮೇಲೆ ನಿಂತು ನಿರ್ಭೀತವಾಗಿ, ಸುಲಲಿತವಾಗಿ ಹಾಗೂ ತಮ್ಮ ಸುಮಧುರ ಕಂಠಸಿರಿಯಿಂದ ಹಾಡುವ ಮೂಲಕ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ.</p>.<p>‘ಅರೇ, ಆ ಮಗು ಎಷ್ಟು ಚೆಂದವಾಗಿ ಹಾಡುತ್ತೆ. ಇಷ್ಟು ಚಿಕ್ಕ ವಯಸ್ಸಿಗೆ ಇದು ಹೇಗೆ ಸಾಧ್ಯ’ ಎಂದು ನೋಡುಗರಲ್ಲಿ ಪ್ರಶ್ನೆ ಮೂಡುವುದು ಸಹಜ. ಅಂತಹ ಕೆಲ ಮಕ್ಕಳ ಹಾಡುಗಾರಿಕೆಯ ಕೌಶಲದ ಹಿಂದೆ ಈ ಗಾಯಕನ ಪರಿಶ್ರಮ ಅಡಗಿದೆ.</p>.<p>‘ಸೃಜನ ಸಂಗೀತ ಶಾಲೆ’ ಸ್ಥಾಪಿಸಿರುವ ನರಹರಿ ದೀಕ್ಷಿತ್ ಉತ್ತಮ ಗಾಯಕ. ಈವರೆಗೆ ಸಾವಿರಾರು ಮಕ್ಕಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ರಿಯಾಲಿಟಿ ಶೋಗಳಿಗೆ ಮಕ್ಕಳನ್ನು ರೂಪಿಸುವುದಕ್ಕೆ ಇವರ ಶಾಲೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಇವರನ್ನು ರಿಯಾಲಿಟಿ ಗುರು ಎಂದೇ ಮಕ್ಕಳು ಕರೆಯುತ್ತಾರೆ.</p>.<p>ಶಿವಮೊಗ್ಗದ ಮಂಚಾಲೆಯವರಾದ ನರಹರಿ, ಎಲ್ಎಲ್ಬಿ ಪದವೀಧರು. ಸಂಗೀತದಲ್ಲಿಯೇ ಬದುಕು ಕಂಡು ಕೊಳ್ಳಬೇಕು ಎಂದು ನಿರ್ಧರಿಸಿ, 1995ರಲ್ಲಿ ‘ಸೃಜನ ಸಂಗೀತ ಶಾಲೆ’ ಆರಂಭಿಸಿದರು. ಪ್ರಾರಂಭದಲ್ಲಿ ಶಾಲೆಗೆ ಸೇರಿದ್ದು ಬೆರಳೆಣಿಕೆಯಷ್ಟೇ ಮಕ್ಕಳಾದರು ಇಂದು ಆ ಶಾಲೆ ರಾಜ್ಯದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದೆ.</p>.<p>ಇಲ್ಲಿ ತರಬೇತಿ ಪಡೆದ ನೂರಾರು ಮಕ್ಕಳು ಟಿವಿಗಳ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ನೇತೃತ್ವದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ, ವಿದೇಶದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಗಾಯನ ಪ್ರದರ್ಶನ ನೀಡಿದ್ದಾರೆ.</p>.<p>ಸದ್ಯ ನರಹರಿ ದೀಕ್ಷಿತ್ ಅವರ ಸಂಗೀತ ಸೇವೆ ಗುರುತಿಸಿರುವ ಅಖಿಲ ಹವ್ಯಕ ಮಹಾಸಭಾವು ಅವರನ್ನು ‘ಹವ್ಯಕ ಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಇದೇ 15ರಂದು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಅಂದು ನರಹರಿ ಅವರನ್ನು ಗೌರವಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>