ಮೀನು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಮೀನಿನ ಖಾದ್ಯಗಳು ದೊಡ್ಡವರ ಬಾಯಲ್ಲಿ ನೀರೂರಿಸಿದರೆ, ಅಕ್ವೇರಿಯಂನಲ್ಲಿ ಈಜಾಡುವ ಬಣ್ಣದ ಮೀನುಗಳೆಂದರೆ ಮಕ್ಕಳಿಗೆ ಪಂಚಪ್ರಾಣ.
ರಾಜ್ಯ ಮೀನುಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಶುಕ್ರವಾರದಿಂದ ಸೋಮವಾರದವರೆಗೆ ನಗರದಲ್ಲಿ ಏರ್ಪಡಿಸಿರುವ ಮತ್ಸ್ಯಮೇಳ ಎಲ್ಲರಿಗೂ ಪ್ರಿಯವಾಗುವಂತಿದೆ.
ಈ ಮತ್ಸ್ಯಮೇಳ ಸಾಮಾನ್ಯರಿಗೆ ಮೀನುಗಾರಿಕೆ ಮತ್ತು ಮೀನು ಕೃಷಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಚಯಿಸುವುದರ ಜೊತೆಗೆ ರೈತರಿಗೆ, ಖಾಸಗಿ ಕಂಪನಿಗಳಿಗೆ, ವಿಜ್ಞಾನಿಗಳಿಗೆ ಜ್ಞಾನ ವಿನಿಮಯದ ವೇದಿಕೆಯಾಗಲಿದೆ.
ಶುಕ್ರವಾರ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಉದ್ಘಾಟನೆ, ಅತಿಥಿಗಳು: ಸಚಿವರಾದ ಜೆ.ಕೃಷ್ಣ ಪಾಲೇಮಾರ್, ಆರ್.ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ವಿ.ಎಸ್. ಆಚಾರ್ಯ, ಬಿ. ಎನ್. ಬಚ್ಚೇಗೌಡ, ಶಾಸಕ ಡಾ. ಸಿ. ಎನ್. ಅಶ್ವಥನಾರಾಯಣ, ಮೇಯರ್ ಎಸ್.ಕೆ.ನಟರಾಜ್
ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ.