ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಲಿ ಕರ್ಣ ಯಕ್ಷಗಾನ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಯಕ್ಷಗಾನದಲ್ಲಿ ಹೊಸ ಪ್ರಯೋಗಗಳಿಗೆ ಕೊರತೆಯಿಲ್ಲ. ಕೆಲವು ಪ್ರಯೋಗಗಳು ಶುದ್ಧ ವ್ಯಾಪಾರಿ ದೃಷ್ಟಿಯಲ್ಲಿ ಮೂಡಿದರೆ ಇನ್ನು ಹಲವಷ್ಟು ಸಾಮಾಜಿಕ ಜಾಗೃತಿಗೆ ಕಲೆಯ ಚೌಕಟ್ಟನ್ನು ವಿಸ್ತರಿಸಿದಂಥವು. ಪೌರಾಣಿಕ ಪ್ರಸಂಗಗಳನ್ನು ಸಮಕಾಲೀನ ಚೌಕಟ್ಟಿನಲ್ಲಿ ನೋಡುವ ಯಕ್ಷಗಾನ ಪ್ರಯೋಗಗಳು ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸುತ್ತವೆ. ಇಂತಹ ಒಂದು ಪ್ರಯೋಗವೇ ರಾಧಾಕೃಷ್ಟ ಉರಾಳ ಸಾರಥ್ಯದಲ್ಲಿ ಪ್ರದರ್ಶನಗೊಳ್ಳಲಿರುವ `ಮಹಾಕಲಿ ಕರ್ಣ~.

ಜಾತಿ, ಅವಕಾಶವಾದಿ ಸಂಬಂಧ, ಸ್ವಾರ್ಥ ರಾಜಕಾರಣದಿಂದ ವಿಧಿ ವಂಚಿತನಾದ ದುರಂತ ನಾಯಕ ಕರ್ಣನ ಬದುಕಿನ ಕುರಿತಾದ `ಮಹಾಕಲಿ ಕರ್ಣ~ ಯಕ್ಷಗಾನದ ಪ್ರಯೋಗ ಶನಿವಾರ ಉತ್ತರಹಳ್ಳಿ ಮುಖ್ಯರಸ್ತೆಯ ಕೆಎಸ್‌ಆರ್‌ಟಿಸಿ ಲೇಔಟ್‌ನ ಚಿಕ್ಕಲಸಂದ್ರದ ಸಿದ್ದಿ ಗಣಪತಿ ಆವರಣದ ಮನೋರಂಜಿನಿ ಸಭಾಂಗಣದಲ್ಲಿ ನಡೆಯಲಿದೆ.

ಹವ್ಯಾಸಿ ಕಲಾವಿದರಾದ ಸುದೀಂದ್ರ ಹೊಳ್ಳ (ಕರ್ಣ), ಸುಜಯೀಂದ್ರ ಹಂದೆ (ಶಲ್ಯ), ಶಿವಾನಂದ ಹೊಳ್ಳ (ಅರ್ಜುನ), ಅಂಬರೀಷ್ ಭಟ್ (ಕೃಷ್ಣ), ಸುರೇಶ ತಂತ್ರಾಡಿ (ಕೌರವ) ಅಭಿನಯವಿದೆ. ಸುಬ್ರಾಯ ಹೆಬ್ಬಾರ್, ಎ.ಪಿ.ಪಾಟಕ್, ಶ್ರೀನಿವಾಸ ಪ್ರಭು, ಹಿಮ್ಮೇಳದಲ್ಲಿ ಸಹಕರಿಸಲಿದ್ದಾರೆ. ಕೆ.ಆರ್.ಸುಧೀಂದ್ರ ಶರ್ಮ, ಡಾ.ಎಚ್. ವಿ.ವೇಣು ಗೋಪಾಲ್, ಎನ್.ಸುರೇಶ್, ಸಚ್ಚಿದಾನಂದ ಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಾಹಿತಿಗೆ: 9448510582.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT