ಈ ಚಿತ್ರದಲ್ಲಿ ನಾಯಕನಿಗೆ ತನಗೆ ಸಿಕ್ಕಿದ ಎಲ್ಲರೊಂದಿಗೆ 10 ನಿಮಿಷ ಕುಳಿತು ಸೆಲ್ಫಿ ತೆಗೆದುಕೊಳ್ಳುವ ಹವ್ಯಾಸ ಹೊಂದಿರುತ್ತಾನೆ. ಅದಕ್ಕಾಗಿ ಚಿತ್ರದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ, ಸಾಲುಮರದ ತಿಮ್ಮಕ್ಕ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ಆನಂದ್ ಗುರೂಜಿ, ಅಟೊ ಚಾಲಕರು, ಪೌರ ಕಾರ್ಮಿಕರ ಜೊತೆ ಕಾಫಿ ಕುಡಿದು ನಾಯಕ ಗೌರಿ ಶಿಖರ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಚಿತ್ರದ ಪ್ರಚಾರಕ್ಕೆ ಈ ತಂತ್ರವನ್ನೇ ಚಿತ್ರತಂಡ ಬಳಸಿಕೊಂಡಿದ್ದು, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಶ್ರೀ ಮುರಳಿ ಮೊದಲಾದವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.