ಬೆಂಗಳೂರು ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿನ ಮಾಗಡಿ ರಸ್ತೆ, ಟೋಲ್ಗೇಟ್ನಿಂದ ಪ್ರಾರಂಭಗೊಂಡು ಮಹಾಲಕ್ಷ್ಮಿಪುರದ ಆಭರಣ ಮಳಿಗೆಯ ತನಕ ರಸ್ತೆಯ ಬಲಭಾಗದಲ್ಲಿ ಸರ್ವೀಸ್ ರಸ್ತೆ ಇದ್ದು, ಮುಂದಕ್ಕೆ ಈ ಸರ್ವೀಸ್ ರಸ್ತೆ ಸ್ಥಗಿತಗೊಂಡಿರುತ್ತದೆ. ಇದರಿಂದ ಇಸ್ಕಾನ್ ದೇವಾಲಯಕ್ಕೆ ಬಂದು ಹೋಗುವ ಭಕ್ತರಿಗೆ ತುಂಬಾ ತೊಂದರೆಯಾಗಿದೆ.
ಈಗಲಾದರೂ ಸಂಬಂಧಪಟ್ಟವರು ಸ್ಥಗಿತಗೊಂಡಿರುವ ಸರ್ವೀಸ್ ರಸ್ತೆಯನ್ನು ಸರ್ಕಾರಿ ಸಾಬೂನು ಕಾರ್ಖಾನೆ ಬಳಿಯಿಂದ ಯಶವಂತಪುರದ ರೈಲ್ವೆ ನಿಲ್ದಾಣದವರೆಗೆ ವಿಸ್ತರಿಸಿಕೊಟ್ಟು ಮತ್ತು ಇಸ್ಕಾನ್ ದೇವಾಲಯದ ಬಳಿ ಸರ್ವೀಸ್ ರಸ್ತೆಯಲ್ಲಿ ಅಂಡರ್ಪಾಸ್ ನಿರ್ಮಿಸಿ ಸಮಸ್ಯೆ ಪರಿಹರಿಸಿಕೊಡಬೇಕಾಗಿ ವಿನಂತಿ.