<p>ಕೋಲಾರದ ಶಾಸಕರ ಫಾರಂನಲ್ಲಿ ಬ್ರುಸೆಲ್ಲೋಸಿಸ್ ಕಾಯಿಲೆ ಪೀಡಿತವಾಗಿರುವ 48 ಹಸುಗಳಿಗೆ ದಯಾಮರಣ ನೀಡಬೇಕೆಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ತೀರಾ ಹಳೆಯ ಕಾಯಿಲೆಯಾದರೂ ಇದರ ಬಗ್ಗೆ ಸೂಕ್ತ ಅರಿವು ಇಲ್ಲ.<br /> <br /> ಮನುಷ್ಯರ ಜೀವಕ್ಕೂ ಅಪಾಯ ತಂದೊಡ್ಡಬಲ್ಲ ಈ ಕಾಯಿಲೆ ಕುರಿತು ಇಲ್ಲಿ ಮಾಹಿತಿ ನೀಡಿದ್ದಾರೆ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ಎನ್.ಬಿ.ಶ್ರೀಧರ<br /> <br /> **<br /> ತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನಡೆದ ಘಟನೆ. ವೈದಿಕ ವೃತ್ತಿಯಲ್ಲಿರುವರೊಬ್ಬರಿಗೆ ವಿಪರೀತ ಸುಸ್ತು ಕಾಣಿಸಿಕೊಂಡಿತು.<br /> <br /> ರಾತ್ರಿಯಲ್ಲಿ ಜ್ವರ ಮತ್ತು ಚಳಿ–ನಡುಕ, ಅಸಹನೀಯ ಕೀಲು–ಬೆನ್ನು ನೋವು... ವೈದ್ಯರು ಇದನ್ನು ಮಲೇರಿಯಾ, ಟೈಫಾಯ್ಡ್ ಎಂದೆಲ್ಲಾ ಹೇಳಿ ಚಿಕಿತ್ಸೆ ನೀಡಿದರು. ಪ್ರಯೋಜನ ಆಗಲಿಲ್ಲ.<br /> <br /> ಕೊನೆಗೂ ದಾವಣಗೆರೆಯ ವೈದ್ಯರೊಬ್ಬರಿಗೆ ಇದು ‘ಬ್ರುಸಲ್ಲೋಸಿಸ್’ ರೋಗ ಎಂದು ತಿಳಿದು, ಚಿಕಿತ್ಸೆ ನೀಡಿದರು. ಈಗ ಅವರು ಚೇತರಿಸಿಕೊಂಡಿದ್ದಾರೆ.</p>.<p>ಆದರೆ ಈ ಕಾಯಿಲೆ ಹೇಗೆ ಬಂತು ಎಂಬುದು ಇಲ್ಲಿ ಕುತೂಹಲವಾಗಿರುವ ವಿಷಯ. ಸಾಮಾನ್ಯವಾಗಿ ವೈದಿಕರು ಯಾವುದೇ ಮನೆಗೆ ಹೋದರೂ ಅಲ್ಲಿ ಗೋಮೂತ್ರ, ಗೋಮಯ ಮತ್ತಿತರ ವಸ್ತುಗಳಿಂದ ಕೂಡಿದ ಪಂಚಗವ್ಯವನ್ನು ಸೇವಿಸಿ ಶುದ್ಧಿ ಮಾಡಿಮುಂದಿನ ಕಾರ್ಯಕ್ರಮಗಳನ್ನು ನಡೆಸುತ್ತಾರೆ.<br /> <br /> ವೈದಿಕರು ಸೇವಿಸಿದ ಪಂಚಗವ್ಯದಲ್ಲಿ ಯಾವುದೋ ಆಕಳಿಗೆ ಬ್ರುಸೆಲ್ಲೋಸಿಸ್ ಕಾಯಿಲೆ ಇದ್ದು ರೋಗಾಣು ಸೇರಿರುವ ಕಾರಣ ಅವರಿಗೆ ರೋಗ ಬಂದಿತ್ತು! ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಲ್ಲೋಸಿಸ್ ಎಂಬ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡಿ ಕಾಡುತ್ತದೆ.<br /> <br /> ಪಶುವೈದ್ಯ ಮಿತ್ರರೊಬ್ಬರ ಪತ್ನಿಗೆ ಪದೇ ಪದೇ ಗರ್ಭಪಾತವಾಗುತ್ತಿತ್ತು. ಹಲವಾರು ಚಿಕಿತ್ಸೆಯ ನಂತರವೂ ಪರಿಣಾಮಕಾರಿಯಾಗಲೇ ಇಲ್ಲ. ನಂತರ ಅವರ ರಕ್ತ ಪರೀಕ್ಷೆ ಮಾಡಿಸಿದಾಗ ಬ್ರುಸೆಲ್ಲಾ ಕಾಯಿಲೆಯಿರುವುದು ಪತ್ತೆಯಾಯಿತು.<br /> <br /> ಪಶುವೈದ್ಯರು ರೋಗಪೀಡಿತ ಜಾನುವಾರಿಗೆ ಚಿಕಿತ್ಸೆ ಮಾಡುವಾಗ ಅಥವಾ ಗರ್ಭಪಾತವಾದ ಆಕಳಿನ ಸತ್ತೆ ತೆಗೆಯುವಾಗ ಈ ರೋಗ ಬಂದಿತ್ತು. ಇದೇ ರೀತಿ ಜಾನುವಾರುಗಳ ಸಂಪರ್ಕದಲ್ಲಿರುವ ಹಲವರಿಗೆ ಈ ಕಾಯಿಲೆಯಿಂದ ತೊಂದರೆಯಾಗಿರುವುದು ಪತ್ತೆಯಾಗಿದೆ. ಪಶುವೈದ್ಯಕೀಯ ವೃತ್ತಿಯಲ್ಲಿರುವ ಹಲವರಿಗೆ ಈ ರೋಗವು ಇರುವ ಬಗ್ಗೆ ವರದಿಗಳಿವೆ.<br /> <br /> <strong>ಕಾಯಿಲೆ– ಲಕ್ಷಣ</strong><br /> ಕಾಯಿಲೆಯು ಮನುಷ್ಯರಿಗೆ ರೋಗಪೀಡಿತ ಹಸುವಿನ ಮೂತ್ರವನ್ನು ಸೇವಿಸುವುದರಿಂದ, ಹಾಲನ್ನು ಕಾಯಿಸದೇ ಕುಡಿಯುವುದರಿಂದ, ಸತ್ತೆ ಮತ್ತು ಇತರ ವಸ್ತುಗಳ ಸಂಪರ್ಕ ಇತ್ಯಾದಿಗಳಿಂದ ಬರುತ್ತದೆ.<br /> <br /> ಮನುಷ್ಯರಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ ಪದೇ ಪದೇ ಜ್ವರ ಬರುವುದು, ಅಸಾಧ್ಯ ಬೆನ್ನು ನೋವು, ಕೀಲು ನೋವು, ರಾತ್ರಿ ಬೆವರುವುದು ಮತ್ತು ಶರೀರದ ತೂಕ ಕ್ರಮೇಣ ಕಡಿಮೆಯಾಗುವುದು ಇತ್ಯಾದಿ.<br /> <br /> ಈ ಕಾಯಿಲೆಯನ್ನು ಅಂಡ್ಯುಲೇಂಟ್ ಜ್ವರವೆಂದೂ ಕರೆಯುತ್ತಾರೆ. ಸ್ತ್ರೀಯರಲ್ಲಿ ಈ ಎಲ್ಲ ರೋಗ ಲಕ್ಷಣಗಳ ಜೊತೆ ಗರ್ಭಿಣಿಯಾದರೆ ಗರ್ಭಪಾತವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಮಲೇರಿಯಾ, ಕ್ಷಯ, ವಿಷಮಶೀತಜ್ವರ ಮತ್ತಿತರ ಕಾಯಿಲೆಗಳನ್ನು ಹೋಲುವ ಇದೇ ರೀತಿ ರೋಗ ಲಕ್ಷಣ ಹೊಂದಿರುವ ಇತರ ಕಾಯಿಲೆಗಳಿಗೆ ಬಹಳಷ್ಟು ಸಲ ಚಿಕಿತ್ಸೆ ನೀಡಲಾಗುತ್ತದೆ.<br /> <br /> ಕೆಲವೇ ಆಸ್ಪತ್ರೆಗಳಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವ ಸೌಲಭ್ಯಗಳಿವೆ. ಈ ರೋಗದ ಬಗ್ಗೆ ಪರಿಕಲ್ಪನೆ ಹೊಂದಿರುವ ತಜ್ಞ ವೈದ್ಯರು ಮಾತ್ರ ಸೂಕ್ತ ಪ್ರಯೋಗಶಾಲಾ ಪರೀಕ್ಷೆಯ ಸಹಾಯದಿಂದ ಈ ರೋಗವನ್ನು ಪತ್ತೆಹಚ್ಚಿ ಉತ್ತಮ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲರು.<br /> <br /> ಕಂದು ರೋಗ ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ.<br /> <br /> <strong>ಆರಂಭದಲ್ಲಿ ಪತ್ತೆ ಕಷ್ಟ</strong><br /> ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವುದು ಬಹಳ ಕಷ್ಟ. ಈ ರೋಗವು ಜಾನುವಾರುಗಳಲ್ಲಿ ಬ್ರುಸೆಲ್ಲಾ ಅಬೋರ್ಟಸ್ ಎಂಬ ರೋಗಾಣುವಿನಿಂದ ಬರುತ್ತದೆ. ಲೈಂಗಿಕವಾಗಿ ಪ್ರಬುದ್ಧತೆ ಹೊಂದಿದ ರಾಸುಗಳಲ್ಲಿ ರೋಗಲಕ್ಷಣಗಳು ಕಂಡು ಬರುತ್ತವೆ.<br /> <br /> ರೋಗಗ್ರಸ್ಥ ಹಸುಗಳು ಮೊದಲು ಕಂದು ಹಾಕುವುದು (ಗರ್ಭಪಾತ) ಇತ್ಯಾದಿ ಲಕ್ಷಣಗಳನ್ನು ತೋರಿಸಿದರೂ ನಂತರ ಸಾಮಾನ್ಯವಾಗಿಯೇ ಕರು ಹಾಕಬಹುದು. ಆದರೆ ಈ ಕರುಗಳು ರೋಗ ತಗಲಿಸಿಕೊಂಡೇ ಜನಿಸಬಹುದು.<br /> <br /> ಇಂತಹ ಕರುಗಳು ಪ್ರೌಢಾವಸ್ಥೆಗೆ ಬರುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಗರ್ಭ ಧರಿಸಿದಾಗ ಮಾತ್ರ ರೋಗಾಣುಗಳು ಬೆಳವಣಿಗೆ ಹೊಂದುತ್ತವೆ.<br /> <br /> ಸೋಂಕು ಹೊಂದಿರುವ ಹೋರಿಗಳ ವೀರ್ಯದಲ್ಲಿ ರೋಗಾಣುಗಳು ಇರುತ್ತಿದ್ದು ಇವೂ ರೋಗಪ್ರಸಾರದಲ್ಲಿ ಮಹತ್ವದ ಪಾತ್ರ ಹೊಂದಿವೆ. ಕೆಲವು ಜಾನುವಾರುಗಳು ರೋಗದ ಲಕ್ಷಣ ತೋರಿಸದಿದ್ದರೂ ರೋಗವಾಹಕಗಳಾಗಿ ಕೆಲಸ ಮಾಡಬಲ್ಲವು.<br /> <br /> <strong>ರೋಗಾಣು ವೃದ್ಧಿ ಹೀಗೆ...</strong><br /> ಶರೀರವನ್ನು ಪ್ರವೇಶಿಸಿದ ರೋಗಾಣುವು ದುಗ್ಧ ಗ್ರಂಥಿಗಳನ್ನು ಸೇರಿಕೊಂಡು ಅಲ್ಲಿ ವೃದ್ಧಿಗೊಳ್ಳುತ್ತದೆ. ನಂತರ ಗುಲ್ಮ, ಕೆಚ್ಚಲು, ಮೂತ್ರಾಶಯ ಮತ್ತು ಭ್ರೂಣವನ್ನು ಹೊಂದಿದ ಗರ್ಭಕೋಶದಲ್ಲಿ ಮನೆಮಾಡುತ್ತದೆ.<br /> <br /> ಗರ್ಭಕೋಶದಲ್ಲಿ ಇವು ಹುಣ್ಣುಗಳನ್ನು ಉಂಟು ಮಾಡುವುದರಿಂದ ಗರ್ಭಕೋಶಕ್ಕೆ ಧಕ್ಕೆ ತಗುಲಿ ಗರ್ಭಪಾತವಾಗುತ್ತದೆ. ಕೆಚ್ಚಲಿನಲ್ಲಿ ರೋಗಾಣುಗಳು ಸೇರಿಕೊಳ್ಳುವುದರಿಂದ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಈ ಹಾಲನ್ನು ಕಾಯಿಸದೇ ಕುಡಿದರೆ ರೋಗ ಬರುವುದು.<br /> <br /> ಜಾನುವಾರುಗಳಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ 5–8 ತಿಂಗಳ ಅವಧಿಯಲ್ಲಿ ಗರ್ಭಪಾತವಾಗುವುದು, ಸತ್ತೆ ಬೀಳದೇ ಇರುವುದು ಮತ್ತು ಗರ್ಭಕಟ್ಟದಿರುವುದು. ಯಾವುದೇ ವಯಸ್ಸಿನ ರಾಸುಗಳಲ್ಲಿ ಈ ಕಾಯಿಲೆ ಕಂಡುಬರಬಹುದು.<br /> <br /> ಹೋರಿಗಳಲ್ಲಿ ವೃಷಣದ ವ್ರಣ ಅಥವಾ ಉರಿಯೂತ ಕಾಣಿಸಿಕೊಳ್ಳಬಹುದು. ಕೆಲವು ಜಾನುವಾರುಗಳಲ್ಲಿ ಕೀಲು ಊದಿಕೊಳ್ಳುವಿಕೆ, ಕೀಲು ನೋವು ಇತ್ಯಾದಿ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಹಂದಿಗಳಲ್ಲಿ ಬ್ರುಸೆಲ್ಲಾ ಕ್ರಿಮಿಯು ಗರ್ಭಪಾತವನ್ನುಂಟು ಮಾಡುವುದಿಲ್ಲ. ಆದರೆ ಕುರಿ, ಮೇಕೆ ಮತ್ತು ಕುದುರೆಗಳಲ್ಲಿ ಗರ್ಭಪಾತವಾಗುವುದನ್ನು ಗಮನಿಸಲಾಗಿದೆ.<br /> <br /> ರೋಗವನ್ನು ರಕ್ತಪ್ರಸರಣದ ಮಾದರಿಯನ್ನು ಪರೀಕ್ಷಿಸುವುದರಿಂದ ಪತ್ತೆ ಮಾಡುವುದು ಕಷ್ಟ. ರಕ್ತಸಾರವನ್ನು(ಸೀರಂ)ಆಧುನಿಕ ವಿಧಾನಗಳಿಂದ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವುದರಿಂದ ಅಥವಾ ಹಾಲನ್ನು ಪರೀಕ್ಷೆಯಿಂದ ಈ ರೋಗವನ್ನು ಪತ್ತೆ ಹಚ್ಚಬಹುದು.<br /> <br /> ಮನುಷ್ಯರಲ್ಲಿ ಈ ರೋಗವನ್ನು ಡಾಕ್ಸಿಸೈಕ್ಲಿನ್ ಮತ್ತು ರಿಫಾಮೈಸಿನ್ ಔಷಧಿಗಳ ಸಂಯುಕ್ತ ಚಿಕಿತ್ಸೆಯಿಂದ ಪರಿಣಾಮಕಾರಿಯಾಗಿ ವಾಸಿ ಮಾಡಬಹುದು. ಆದರೆ ಆಕಳು ಅಥವಾ ಇತರ ನಾಲ್ಕು ಹೊಟ್ಟೆ ಹೊಂದಿರುವ ಪ್ರಾಣಿಗಳಲ್ಲಿ ಅವುಗಳ ದೊಡ್ಡಹೊಟ್ಟೆಯಲ್ಲಿ(ರುಮೆನ್) ಈ ಔಷಧಿಗಳು ನಿಷ್ಕ್ರಿಯಗೊಳ್ಳುವುದರಿಂದ ಚಿಕಿತ್ಸೆ ಪರಿಣಾಮಕಾರಿಯಾಗುವುದಿಲ್ಲ.<br /> <br /> ಆದರೂ ಇತ್ತೀಚಿಗೆ ಮಾರುಕಟ್ಟೆಗೆ ಬಂದ ಹಲವು ಆಧುನಿಕ ಜೀವನಿರೋಧಕ ಚುಚ್ಚುಮದ್ದುಗಳನ್ನು ಬಳಸಿ ತಜ್ಞ ಪಶುವೈದ್ಯರು ಈ ರೋಗವನ್ನು ವಾಸಿ ಮಾಡಬಹುದಾದರೂ ಚಿಕಿತ್ಸಾವೆಚ್ಚ ದುಬಾರಿ.<br /> <br /> ರೋಗ ಬರದಂತೆ ತಡೆಗಟ್ಟುವುದು ಅತ್ಯಂತ ಉಪಯುಕ್ತ ವಿಧಾನ. ಲಸಿಕಾ ಪ್ರಯೋಗವು ಅತಿ ಮುಖ್ಯವಾದ ಮಾರ್ಗ. ಬ್ರುಸೆಲ್ಲಾ ಅಬೊರ್ಟಸ್ ಪ್ರಬೇಧ 19 ಜೀವಂತ ರೋಗಾಣುವನ್ನು ಹೊಂದಿದ ಲಸಿಕೆಯನ್ನು 4–8 ತಿಂಗಳಿನ ವಯಸ್ಸಿನಲ್ಲಿ ಕೊಮರೆ ರೋಗವನ್ನು ಪರಿಣಾಮಕಾರಿಯಗಿ ತಡೆಗಟ್ಟಲು ಸಾಧ್ಯ.<br /> <br /> ತುಂಬು ಗರ್ಭಧರಿಸಿದ ರಾಸುಗಳಿಗೆ ಈ ಲಸಿಕೆಯನ್ನು ನೀಡಿದರೆ ಗರ್ಭಪಾತವಾಗುವ ಸಾಧ್ಯತೆ ಇದೆ. ಸದ್ಯ ಇತರ ಉತ್ತಮ ಲಸಿಕೆಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ. ಲೇಖಕರ ಸಂಪರ್ಕ ಸಂಖ್ಯೆ: 080 23410509.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರದ ಶಾಸಕರ ಫಾರಂನಲ್ಲಿ ಬ್ರುಸೆಲ್ಲೋಸಿಸ್ ಕಾಯಿಲೆ ಪೀಡಿತವಾಗಿರುವ 48 ಹಸುಗಳಿಗೆ ದಯಾಮರಣ ನೀಡಬೇಕೆಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ತೀರಾ ಹಳೆಯ ಕಾಯಿಲೆಯಾದರೂ ಇದರ ಬಗ್ಗೆ ಸೂಕ್ತ ಅರಿವು ಇಲ್ಲ.<br /> <br /> ಮನುಷ್ಯರ ಜೀವಕ್ಕೂ ಅಪಾಯ ತಂದೊಡ್ಡಬಲ್ಲ ಈ ಕಾಯಿಲೆ ಕುರಿತು ಇಲ್ಲಿ ಮಾಹಿತಿ ನೀಡಿದ್ದಾರೆ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ಎನ್.ಬಿ.ಶ್ರೀಧರ<br /> <br /> **<br /> ತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನಡೆದ ಘಟನೆ. ವೈದಿಕ ವೃತ್ತಿಯಲ್ಲಿರುವರೊಬ್ಬರಿಗೆ ವಿಪರೀತ ಸುಸ್ತು ಕಾಣಿಸಿಕೊಂಡಿತು.<br /> <br /> ರಾತ್ರಿಯಲ್ಲಿ ಜ್ವರ ಮತ್ತು ಚಳಿ–ನಡುಕ, ಅಸಹನೀಯ ಕೀಲು–ಬೆನ್ನು ನೋವು... ವೈದ್ಯರು ಇದನ್ನು ಮಲೇರಿಯಾ, ಟೈಫಾಯ್ಡ್ ಎಂದೆಲ್ಲಾ ಹೇಳಿ ಚಿಕಿತ್ಸೆ ನೀಡಿದರು. ಪ್ರಯೋಜನ ಆಗಲಿಲ್ಲ.<br /> <br /> ಕೊನೆಗೂ ದಾವಣಗೆರೆಯ ವೈದ್ಯರೊಬ್ಬರಿಗೆ ಇದು ‘ಬ್ರುಸಲ್ಲೋಸಿಸ್’ ರೋಗ ಎಂದು ತಿಳಿದು, ಚಿಕಿತ್ಸೆ ನೀಡಿದರು. ಈಗ ಅವರು ಚೇತರಿಸಿಕೊಂಡಿದ್ದಾರೆ.</p>.<p>ಆದರೆ ಈ ಕಾಯಿಲೆ ಹೇಗೆ ಬಂತು ಎಂಬುದು ಇಲ್ಲಿ ಕುತೂಹಲವಾಗಿರುವ ವಿಷಯ. ಸಾಮಾನ್ಯವಾಗಿ ವೈದಿಕರು ಯಾವುದೇ ಮನೆಗೆ ಹೋದರೂ ಅಲ್ಲಿ ಗೋಮೂತ್ರ, ಗೋಮಯ ಮತ್ತಿತರ ವಸ್ತುಗಳಿಂದ ಕೂಡಿದ ಪಂಚಗವ್ಯವನ್ನು ಸೇವಿಸಿ ಶುದ್ಧಿ ಮಾಡಿಮುಂದಿನ ಕಾರ್ಯಕ್ರಮಗಳನ್ನು ನಡೆಸುತ್ತಾರೆ.<br /> <br /> ವೈದಿಕರು ಸೇವಿಸಿದ ಪಂಚಗವ್ಯದಲ್ಲಿ ಯಾವುದೋ ಆಕಳಿಗೆ ಬ್ರುಸೆಲ್ಲೋಸಿಸ್ ಕಾಯಿಲೆ ಇದ್ದು ರೋಗಾಣು ಸೇರಿರುವ ಕಾರಣ ಅವರಿಗೆ ರೋಗ ಬಂದಿತ್ತು! ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಲ್ಲೋಸಿಸ್ ಎಂಬ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡಿ ಕಾಡುತ್ತದೆ.<br /> <br /> ಪಶುವೈದ್ಯ ಮಿತ್ರರೊಬ್ಬರ ಪತ್ನಿಗೆ ಪದೇ ಪದೇ ಗರ್ಭಪಾತವಾಗುತ್ತಿತ್ತು. ಹಲವಾರು ಚಿಕಿತ್ಸೆಯ ನಂತರವೂ ಪರಿಣಾಮಕಾರಿಯಾಗಲೇ ಇಲ್ಲ. ನಂತರ ಅವರ ರಕ್ತ ಪರೀಕ್ಷೆ ಮಾಡಿಸಿದಾಗ ಬ್ರುಸೆಲ್ಲಾ ಕಾಯಿಲೆಯಿರುವುದು ಪತ್ತೆಯಾಯಿತು.<br /> <br /> ಪಶುವೈದ್ಯರು ರೋಗಪೀಡಿತ ಜಾನುವಾರಿಗೆ ಚಿಕಿತ್ಸೆ ಮಾಡುವಾಗ ಅಥವಾ ಗರ್ಭಪಾತವಾದ ಆಕಳಿನ ಸತ್ತೆ ತೆಗೆಯುವಾಗ ಈ ರೋಗ ಬಂದಿತ್ತು. ಇದೇ ರೀತಿ ಜಾನುವಾರುಗಳ ಸಂಪರ್ಕದಲ್ಲಿರುವ ಹಲವರಿಗೆ ಈ ಕಾಯಿಲೆಯಿಂದ ತೊಂದರೆಯಾಗಿರುವುದು ಪತ್ತೆಯಾಗಿದೆ. ಪಶುವೈದ್ಯಕೀಯ ವೃತ್ತಿಯಲ್ಲಿರುವ ಹಲವರಿಗೆ ಈ ರೋಗವು ಇರುವ ಬಗ್ಗೆ ವರದಿಗಳಿವೆ.<br /> <br /> <strong>ಕಾಯಿಲೆ– ಲಕ್ಷಣ</strong><br /> ಕಾಯಿಲೆಯು ಮನುಷ್ಯರಿಗೆ ರೋಗಪೀಡಿತ ಹಸುವಿನ ಮೂತ್ರವನ್ನು ಸೇವಿಸುವುದರಿಂದ, ಹಾಲನ್ನು ಕಾಯಿಸದೇ ಕುಡಿಯುವುದರಿಂದ, ಸತ್ತೆ ಮತ್ತು ಇತರ ವಸ್ತುಗಳ ಸಂಪರ್ಕ ಇತ್ಯಾದಿಗಳಿಂದ ಬರುತ್ತದೆ.<br /> <br /> ಮನುಷ್ಯರಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ ಪದೇ ಪದೇ ಜ್ವರ ಬರುವುದು, ಅಸಾಧ್ಯ ಬೆನ್ನು ನೋವು, ಕೀಲು ನೋವು, ರಾತ್ರಿ ಬೆವರುವುದು ಮತ್ತು ಶರೀರದ ತೂಕ ಕ್ರಮೇಣ ಕಡಿಮೆಯಾಗುವುದು ಇತ್ಯಾದಿ.<br /> <br /> ಈ ಕಾಯಿಲೆಯನ್ನು ಅಂಡ್ಯುಲೇಂಟ್ ಜ್ವರವೆಂದೂ ಕರೆಯುತ್ತಾರೆ. ಸ್ತ್ರೀಯರಲ್ಲಿ ಈ ಎಲ್ಲ ರೋಗ ಲಕ್ಷಣಗಳ ಜೊತೆ ಗರ್ಭಿಣಿಯಾದರೆ ಗರ್ಭಪಾತವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಮಲೇರಿಯಾ, ಕ್ಷಯ, ವಿಷಮಶೀತಜ್ವರ ಮತ್ತಿತರ ಕಾಯಿಲೆಗಳನ್ನು ಹೋಲುವ ಇದೇ ರೀತಿ ರೋಗ ಲಕ್ಷಣ ಹೊಂದಿರುವ ಇತರ ಕಾಯಿಲೆಗಳಿಗೆ ಬಹಳಷ್ಟು ಸಲ ಚಿಕಿತ್ಸೆ ನೀಡಲಾಗುತ್ತದೆ.<br /> <br /> ಕೆಲವೇ ಆಸ್ಪತ್ರೆಗಳಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವ ಸೌಲಭ್ಯಗಳಿವೆ. ಈ ರೋಗದ ಬಗ್ಗೆ ಪರಿಕಲ್ಪನೆ ಹೊಂದಿರುವ ತಜ್ಞ ವೈದ್ಯರು ಮಾತ್ರ ಸೂಕ್ತ ಪ್ರಯೋಗಶಾಲಾ ಪರೀಕ್ಷೆಯ ಸಹಾಯದಿಂದ ಈ ರೋಗವನ್ನು ಪತ್ತೆಹಚ್ಚಿ ಉತ್ತಮ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲರು.<br /> <br /> ಕಂದು ರೋಗ ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ.<br /> <br /> <strong>ಆರಂಭದಲ್ಲಿ ಪತ್ತೆ ಕಷ್ಟ</strong><br /> ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವುದು ಬಹಳ ಕಷ್ಟ. ಈ ರೋಗವು ಜಾನುವಾರುಗಳಲ್ಲಿ ಬ್ರುಸೆಲ್ಲಾ ಅಬೋರ್ಟಸ್ ಎಂಬ ರೋಗಾಣುವಿನಿಂದ ಬರುತ್ತದೆ. ಲೈಂಗಿಕವಾಗಿ ಪ್ರಬುದ್ಧತೆ ಹೊಂದಿದ ರಾಸುಗಳಲ್ಲಿ ರೋಗಲಕ್ಷಣಗಳು ಕಂಡು ಬರುತ್ತವೆ.<br /> <br /> ರೋಗಗ್ರಸ್ಥ ಹಸುಗಳು ಮೊದಲು ಕಂದು ಹಾಕುವುದು (ಗರ್ಭಪಾತ) ಇತ್ಯಾದಿ ಲಕ್ಷಣಗಳನ್ನು ತೋರಿಸಿದರೂ ನಂತರ ಸಾಮಾನ್ಯವಾಗಿಯೇ ಕರು ಹಾಕಬಹುದು. ಆದರೆ ಈ ಕರುಗಳು ರೋಗ ತಗಲಿಸಿಕೊಂಡೇ ಜನಿಸಬಹುದು.<br /> <br /> ಇಂತಹ ಕರುಗಳು ಪ್ರೌಢಾವಸ್ಥೆಗೆ ಬರುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಗರ್ಭ ಧರಿಸಿದಾಗ ಮಾತ್ರ ರೋಗಾಣುಗಳು ಬೆಳವಣಿಗೆ ಹೊಂದುತ್ತವೆ.<br /> <br /> ಸೋಂಕು ಹೊಂದಿರುವ ಹೋರಿಗಳ ವೀರ್ಯದಲ್ಲಿ ರೋಗಾಣುಗಳು ಇರುತ್ತಿದ್ದು ಇವೂ ರೋಗಪ್ರಸಾರದಲ್ಲಿ ಮಹತ್ವದ ಪಾತ್ರ ಹೊಂದಿವೆ. ಕೆಲವು ಜಾನುವಾರುಗಳು ರೋಗದ ಲಕ್ಷಣ ತೋರಿಸದಿದ್ದರೂ ರೋಗವಾಹಕಗಳಾಗಿ ಕೆಲಸ ಮಾಡಬಲ್ಲವು.<br /> <br /> <strong>ರೋಗಾಣು ವೃದ್ಧಿ ಹೀಗೆ...</strong><br /> ಶರೀರವನ್ನು ಪ್ರವೇಶಿಸಿದ ರೋಗಾಣುವು ದುಗ್ಧ ಗ್ರಂಥಿಗಳನ್ನು ಸೇರಿಕೊಂಡು ಅಲ್ಲಿ ವೃದ್ಧಿಗೊಳ್ಳುತ್ತದೆ. ನಂತರ ಗುಲ್ಮ, ಕೆಚ್ಚಲು, ಮೂತ್ರಾಶಯ ಮತ್ತು ಭ್ರೂಣವನ್ನು ಹೊಂದಿದ ಗರ್ಭಕೋಶದಲ್ಲಿ ಮನೆಮಾಡುತ್ತದೆ.<br /> <br /> ಗರ್ಭಕೋಶದಲ್ಲಿ ಇವು ಹುಣ್ಣುಗಳನ್ನು ಉಂಟು ಮಾಡುವುದರಿಂದ ಗರ್ಭಕೋಶಕ್ಕೆ ಧಕ್ಕೆ ತಗುಲಿ ಗರ್ಭಪಾತವಾಗುತ್ತದೆ. ಕೆಚ್ಚಲಿನಲ್ಲಿ ರೋಗಾಣುಗಳು ಸೇರಿಕೊಳ್ಳುವುದರಿಂದ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಈ ಹಾಲನ್ನು ಕಾಯಿಸದೇ ಕುಡಿದರೆ ರೋಗ ಬರುವುದು.<br /> <br /> ಜಾನುವಾರುಗಳಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ 5–8 ತಿಂಗಳ ಅವಧಿಯಲ್ಲಿ ಗರ್ಭಪಾತವಾಗುವುದು, ಸತ್ತೆ ಬೀಳದೇ ಇರುವುದು ಮತ್ತು ಗರ್ಭಕಟ್ಟದಿರುವುದು. ಯಾವುದೇ ವಯಸ್ಸಿನ ರಾಸುಗಳಲ್ಲಿ ಈ ಕಾಯಿಲೆ ಕಂಡುಬರಬಹುದು.<br /> <br /> ಹೋರಿಗಳಲ್ಲಿ ವೃಷಣದ ವ್ರಣ ಅಥವಾ ಉರಿಯೂತ ಕಾಣಿಸಿಕೊಳ್ಳಬಹುದು. ಕೆಲವು ಜಾನುವಾರುಗಳಲ್ಲಿ ಕೀಲು ಊದಿಕೊಳ್ಳುವಿಕೆ, ಕೀಲು ನೋವು ಇತ್ಯಾದಿ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಹಂದಿಗಳಲ್ಲಿ ಬ್ರುಸೆಲ್ಲಾ ಕ್ರಿಮಿಯು ಗರ್ಭಪಾತವನ್ನುಂಟು ಮಾಡುವುದಿಲ್ಲ. ಆದರೆ ಕುರಿ, ಮೇಕೆ ಮತ್ತು ಕುದುರೆಗಳಲ್ಲಿ ಗರ್ಭಪಾತವಾಗುವುದನ್ನು ಗಮನಿಸಲಾಗಿದೆ.<br /> <br /> ರೋಗವನ್ನು ರಕ್ತಪ್ರಸರಣದ ಮಾದರಿಯನ್ನು ಪರೀಕ್ಷಿಸುವುದರಿಂದ ಪತ್ತೆ ಮಾಡುವುದು ಕಷ್ಟ. ರಕ್ತಸಾರವನ್ನು(ಸೀರಂ)ಆಧುನಿಕ ವಿಧಾನಗಳಿಂದ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವುದರಿಂದ ಅಥವಾ ಹಾಲನ್ನು ಪರೀಕ್ಷೆಯಿಂದ ಈ ರೋಗವನ್ನು ಪತ್ತೆ ಹಚ್ಚಬಹುದು.<br /> <br /> ಮನುಷ್ಯರಲ್ಲಿ ಈ ರೋಗವನ್ನು ಡಾಕ್ಸಿಸೈಕ್ಲಿನ್ ಮತ್ತು ರಿಫಾಮೈಸಿನ್ ಔಷಧಿಗಳ ಸಂಯುಕ್ತ ಚಿಕಿತ್ಸೆಯಿಂದ ಪರಿಣಾಮಕಾರಿಯಾಗಿ ವಾಸಿ ಮಾಡಬಹುದು. ಆದರೆ ಆಕಳು ಅಥವಾ ಇತರ ನಾಲ್ಕು ಹೊಟ್ಟೆ ಹೊಂದಿರುವ ಪ್ರಾಣಿಗಳಲ್ಲಿ ಅವುಗಳ ದೊಡ್ಡಹೊಟ್ಟೆಯಲ್ಲಿ(ರುಮೆನ್) ಈ ಔಷಧಿಗಳು ನಿಷ್ಕ್ರಿಯಗೊಳ್ಳುವುದರಿಂದ ಚಿಕಿತ್ಸೆ ಪರಿಣಾಮಕಾರಿಯಾಗುವುದಿಲ್ಲ.<br /> <br /> ಆದರೂ ಇತ್ತೀಚಿಗೆ ಮಾರುಕಟ್ಟೆಗೆ ಬಂದ ಹಲವು ಆಧುನಿಕ ಜೀವನಿರೋಧಕ ಚುಚ್ಚುಮದ್ದುಗಳನ್ನು ಬಳಸಿ ತಜ್ಞ ಪಶುವೈದ್ಯರು ಈ ರೋಗವನ್ನು ವಾಸಿ ಮಾಡಬಹುದಾದರೂ ಚಿಕಿತ್ಸಾವೆಚ್ಚ ದುಬಾರಿ.<br /> <br /> ರೋಗ ಬರದಂತೆ ತಡೆಗಟ್ಟುವುದು ಅತ್ಯಂತ ಉಪಯುಕ್ತ ವಿಧಾನ. ಲಸಿಕಾ ಪ್ರಯೋಗವು ಅತಿ ಮುಖ್ಯವಾದ ಮಾರ್ಗ. ಬ್ರುಸೆಲ್ಲಾ ಅಬೊರ್ಟಸ್ ಪ್ರಬೇಧ 19 ಜೀವಂತ ರೋಗಾಣುವನ್ನು ಹೊಂದಿದ ಲಸಿಕೆಯನ್ನು 4–8 ತಿಂಗಳಿನ ವಯಸ್ಸಿನಲ್ಲಿ ಕೊಮರೆ ರೋಗವನ್ನು ಪರಿಣಾಮಕಾರಿಯಗಿ ತಡೆಗಟ್ಟಲು ಸಾಧ್ಯ.<br /> <br /> ತುಂಬು ಗರ್ಭಧರಿಸಿದ ರಾಸುಗಳಿಗೆ ಈ ಲಸಿಕೆಯನ್ನು ನೀಡಿದರೆ ಗರ್ಭಪಾತವಾಗುವ ಸಾಧ್ಯತೆ ಇದೆ. ಸದ್ಯ ಇತರ ಉತ್ತಮ ಲಸಿಕೆಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ. ಲೇಖಕರ ಸಂಪರ್ಕ ಸಂಖ್ಯೆ: 080 23410509.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>