<p><strong>ರಾಯಚೂರು: </strong>ಮಂತ್ರಾಲಯ ಮಠದ ಗೋಶಾಲೆಯಲ್ಲಿ ಸೊಳ್ಳೆಗಳಿಂದ ಹರಡಿರುವ ‘ಟ್ರೈಪಾನೊಸೋಮಿಯಾಸಿಸ್’ (ನಿದ್ರಾ ಕಾಯಿಲೆ) ಸೋಂಕಿನಿಂದ ನಾಲ್ಕು ದಿನಗಳಿಂದ 17 ಹಸುಗಳು ಮೃತಪಟ್ಟಿವೆ.<br /> <br /> ಕಳೆದ ವಾರ ಸುರಿದ ಮಳೆಯಿಂದ ಗೋಶಾಲೆಯ ಸುತ್ತಮುತ್ತ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಅವು ಕಚ್ಚಿದ್ದರಿಂದ ಈ ಸೋಂಕು ತಗುಲಿದೆ.<br /> ಬೆಂಗಳೂರಿನ ಪಶು ವೈದ್ಯ ವಿಜ್ಞಾನ ಸಂಸ್ಥೆ ಮತ್ತು ಕರ್ನೂಲಿನ ಪಶು ರೋಗ ಪರೀಕ್ಷಾ ಪ್ರಯೋಗಾಲಯದ ವೈದ್ಯರ ತಂಡ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಸೋಂಕು ಪೀಡಿತ ಹಸುಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ.<br /> <br /> <strong>ಮಠದ ಸ್ಪಷ್ಟನೆ:</strong> ‘ಸೋಂಕಿನಿಂದ 10 ಹಸುಗಳು ಸಾವನ್ನಪ್ಪಿದ್ದು, ಸೋಂಕು ತಗುಲಿದ್ದ 80ಕ್ಕೂ ಹೆಚ್ಚು ಹಸುಗಳಿಗೆ ಚುಚ್ಚುಮದ್ದು ನೀಡಲಾಗಿದೆ. ಗೋಶಾಲೆಯ ಸುತ್ತಮುತ್ತ ನಿಂತ ಮಳೆ ನೀರನ್ನು ಹೊರಹಾಕಲಾಗಿದ್ದು, ಕೀಟನಾಶಕ ಸಿಂಪಡಣೆ ಮಾಡಲಾಗಿದೆ’ ಎಂದು ಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ ತಿಳಿಸಿದರು.<br /> <br /> ‘ಮುಂಜಾಗ್ರತಾ ಕ್ರಮವಾಗಿ 1,150 ಹಸುಗಳು ಮತ್ತು ಮೂರು ಕುದುರೆಗಳಿಗೂ ಚುಚ್ಚುಮದ್ದು ಹಾಕಲಾಗಿದ್ದು, ಸೋಂಕು ಹತೋಟಿಯಲ್ಲಿದೆ’ ಎಂದರು.<br /> ‘ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ‘ಟಿಎಸ್ಇ’ ಜಾತಿಯ ಸೊಳ್ಳೆಗಳಿಂದ ಈ ಸೋಂಕು ಹರಡುತ್ತದೆ’ ಎಂದು ಪಶು ವೈದ್ಯಾಧಿಕಾರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಮಂತ್ರಾಲಯ ಮಠದ ಗೋಶಾಲೆಯಲ್ಲಿ ಸೊಳ್ಳೆಗಳಿಂದ ಹರಡಿರುವ ‘ಟ್ರೈಪಾನೊಸೋಮಿಯಾಸಿಸ್’ (ನಿದ್ರಾ ಕಾಯಿಲೆ) ಸೋಂಕಿನಿಂದ ನಾಲ್ಕು ದಿನಗಳಿಂದ 17 ಹಸುಗಳು ಮೃತಪಟ್ಟಿವೆ.<br /> <br /> ಕಳೆದ ವಾರ ಸುರಿದ ಮಳೆಯಿಂದ ಗೋಶಾಲೆಯ ಸುತ್ತಮುತ್ತ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಅವು ಕಚ್ಚಿದ್ದರಿಂದ ಈ ಸೋಂಕು ತಗುಲಿದೆ.<br /> ಬೆಂಗಳೂರಿನ ಪಶು ವೈದ್ಯ ವಿಜ್ಞಾನ ಸಂಸ್ಥೆ ಮತ್ತು ಕರ್ನೂಲಿನ ಪಶು ರೋಗ ಪರೀಕ್ಷಾ ಪ್ರಯೋಗಾಲಯದ ವೈದ್ಯರ ತಂಡ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಸೋಂಕು ಪೀಡಿತ ಹಸುಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ.<br /> <br /> <strong>ಮಠದ ಸ್ಪಷ್ಟನೆ:</strong> ‘ಸೋಂಕಿನಿಂದ 10 ಹಸುಗಳು ಸಾವನ್ನಪ್ಪಿದ್ದು, ಸೋಂಕು ತಗುಲಿದ್ದ 80ಕ್ಕೂ ಹೆಚ್ಚು ಹಸುಗಳಿಗೆ ಚುಚ್ಚುಮದ್ದು ನೀಡಲಾಗಿದೆ. ಗೋಶಾಲೆಯ ಸುತ್ತಮುತ್ತ ನಿಂತ ಮಳೆ ನೀರನ್ನು ಹೊರಹಾಕಲಾಗಿದ್ದು, ಕೀಟನಾಶಕ ಸಿಂಪಡಣೆ ಮಾಡಲಾಗಿದೆ’ ಎಂದು ಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ ತಿಳಿಸಿದರು.<br /> <br /> ‘ಮುಂಜಾಗ್ರತಾ ಕ್ರಮವಾಗಿ 1,150 ಹಸುಗಳು ಮತ್ತು ಮೂರು ಕುದುರೆಗಳಿಗೂ ಚುಚ್ಚುಮದ್ದು ಹಾಕಲಾಗಿದ್ದು, ಸೋಂಕು ಹತೋಟಿಯಲ್ಲಿದೆ’ ಎಂದರು.<br /> ‘ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ‘ಟಿಎಸ್ಇ’ ಜಾತಿಯ ಸೊಳ್ಳೆಗಳಿಂದ ಈ ಸೋಂಕು ಹರಡುತ್ತದೆ’ ಎಂದು ಪಶು ವೈದ್ಯಾಧಿಕಾರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>