<p><strong>ಹೈದರಾಬಾದ್: </strong>ತೆಲಂಗಾಣ ರಾಜ್ಯ ರಚನೆಯಾದ ಎರಡು ವರ್ಷಗಳ ಬಳಿಕ ನೂತನವಾಗಿ 21 ಹೊಸ ಜಿಲ್ಲೆಗಳನ್ನು ಮಂಗಳವಾರ ರಚಿಸಲಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಸ್ವಂತ ಕ್ಷೇತ್ರವಾದ ಮೆದಕ್ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಚಿಸಿರುವ ಸಿದ್ದಿಪೇಟ್ ಜಿಲ್ಲೆಗೆ ಚಾಲನೆ ನೀಡಿದರು.</p>.<p>ವಿಜಯದಶಮಿಯಂದೇ ಹೊಸ ಜಿಲ್ಲೆಗಳಿಗೆ ಚಾಲನೆ ನೀಡಿದ್ದರಿಂದ ರಾಜ್ಯದಾದ್ಯಂತ ಸಂಭ್ರಮ ನೆಲೆಸಿತ್ತು. 2014ರ ಜೂನ್ 4ರಂದು ಆಂಧ್ರಪ್ರದೇಶದಿಂದ ಹೊರಬಂದ ತೆಲಂಗಾಣ 29ನೇ ರಾಜ್ಯವಾಗಿ ಸ್ಥಾಪನೆಯಾಗಿತ್ತು.</p>.<p>ಉತ್ತಮ ಆಡಳಿತ, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶದಿಂದ ಹೊಸ ಜಿಲ್ಲೆಗಳನ್ನು ರಚಿಸಲಾಗುವುದು ಎಂದು ರಾಜ್ಯ ರಚನೆ ಸಂದರ್ಭ ಚಂದ್ರಶೇಖರ್ ರಾವ್ ಅವರು ಹೇಳಿದ್ದರು.</p>.<p>ಹೊಸ ಜಿಲ್ಲೆಗಳೊಂದಿಗೆ ಮಂಡಲಗಳು, ಕಂದಾಯ ವಿಭಾಗ ಮತ್ತು ಇತರ ಆಡಳಿತ ಘಟಕಗಳನ್ನೂ ಸಹ ಇದೇ ವೇಳೆ ಮರು ಸ್ಥಾಪಿಸಲಾಗಿದೆ.</p>.<p><strong>ಹೊಸ ಜಿಲ್ಲೆಗಳು:</strong> ಸಿದ್ದಿಪೇಟ, ಜನಗಾಮ, ಜಯಶಂಕರ್, ಜಗಿತ್ಯಾಲ, ವಾರಂಗಲ್ ಗ್ರಾಮಾಂತರ, ಯದಾದ್ರಿ, ಪೆದ್ದಪಲ್ಲಿ, ಕಾಮಾರೆಡ್ಡಿ, ಮೆದಕ್, ಮಂಚಿರ್ಯಾಲ, ವಿಕಾರಾಬಾದ್, ರಾಜನ್ನ, ಆಸಿಫಾಬಾದ್, ಸೂರ್ಯಾಪೇಟ, ಕೊತ್ತಗೂಡೆಂ, ನಿರ್ಮಲ್, ವನಪರ್ತಿ, ನಾಗರ್ ಕರ್ನೂಲು, ಮಹಬೂಬಾಬಾದ್ ಜೋಗುಲಾಂಬ ಮತ್ತು ಮಲ್ಕಾಜ್ಗಿರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ತೆಲಂಗಾಣ ರಾಜ್ಯ ರಚನೆಯಾದ ಎರಡು ವರ್ಷಗಳ ಬಳಿಕ ನೂತನವಾಗಿ 21 ಹೊಸ ಜಿಲ್ಲೆಗಳನ್ನು ಮಂಗಳವಾರ ರಚಿಸಲಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಸ್ವಂತ ಕ್ಷೇತ್ರವಾದ ಮೆದಕ್ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಚಿಸಿರುವ ಸಿದ್ದಿಪೇಟ್ ಜಿಲ್ಲೆಗೆ ಚಾಲನೆ ನೀಡಿದರು.</p>.<p>ವಿಜಯದಶಮಿಯಂದೇ ಹೊಸ ಜಿಲ್ಲೆಗಳಿಗೆ ಚಾಲನೆ ನೀಡಿದ್ದರಿಂದ ರಾಜ್ಯದಾದ್ಯಂತ ಸಂಭ್ರಮ ನೆಲೆಸಿತ್ತು. 2014ರ ಜೂನ್ 4ರಂದು ಆಂಧ್ರಪ್ರದೇಶದಿಂದ ಹೊರಬಂದ ತೆಲಂಗಾಣ 29ನೇ ರಾಜ್ಯವಾಗಿ ಸ್ಥಾಪನೆಯಾಗಿತ್ತು.</p>.<p>ಉತ್ತಮ ಆಡಳಿತ, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶದಿಂದ ಹೊಸ ಜಿಲ್ಲೆಗಳನ್ನು ರಚಿಸಲಾಗುವುದು ಎಂದು ರಾಜ್ಯ ರಚನೆ ಸಂದರ್ಭ ಚಂದ್ರಶೇಖರ್ ರಾವ್ ಅವರು ಹೇಳಿದ್ದರು.</p>.<p>ಹೊಸ ಜಿಲ್ಲೆಗಳೊಂದಿಗೆ ಮಂಡಲಗಳು, ಕಂದಾಯ ವಿಭಾಗ ಮತ್ತು ಇತರ ಆಡಳಿತ ಘಟಕಗಳನ್ನೂ ಸಹ ಇದೇ ವೇಳೆ ಮರು ಸ್ಥಾಪಿಸಲಾಗಿದೆ.</p>.<p><strong>ಹೊಸ ಜಿಲ್ಲೆಗಳು:</strong> ಸಿದ್ದಿಪೇಟ, ಜನಗಾಮ, ಜಯಶಂಕರ್, ಜಗಿತ್ಯಾಲ, ವಾರಂಗಲ್ ಗ್ರಾಮಾಂತರ, ಯದಾದ್ರಿ, ಪೆದ್ದಪಲ್ಲಿ, ಕಾಮಾರೆಡ್ಡಿ, ಮೆದಕ್, ಮಂಚಿರ್ಯಾಲ, ವಿಕಾರಾಬಾದ್, ರಾಜನ್ನ, ಆಸಿಫಾಬಾದ್, ಸೂರ್ಯಾಪೇಟ, ಕೊತ್ತಗೂಡೆಂ, ನಿರ್ಮಲ್, ವನಪರ್ತಿ, ನಾಗರ್ ಕರ್ನೂಲು, ಮಹಬೂಬಾಬಾದ್ ಜೋಗುಲಾಂಬ ಮತ್ತು ಮಲ್ಕಾಜ್ಗಿರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>