<p><strong>ಅಲಹಾಬಾದ್: </strong>ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ಈ ಪದ್ಧತಿಯು ಅತ್ಯಂತ ಕ್ರೂರ ಹಾಗೂ ಅವಹೇಳನಕಾರಿ ಎಂದು ಅಭಿಪ್ರಾಯಪಟ್ಟಿದೆ.</p>.<p>ದಂಪತಿ ನಡುವೆ ಹೊಂದಾಣಿಕೆಗೆ ಸಾಧ್ಯವೇ ಇಲ್ಲ ಎಂದಾಗ ಕೊನೆ ಕ್ಷಣದಲ್ಲಿ ವಿಚ್ಛೇದನ ನೀಡಬೇಕು ಎಂದು ಮುಸ್ಲಿಂ ಕಾನೂನಿನಲ್ಲಿ ಉಲ್ಲೇಖಿತವಾಗಿದೆ. ದಂಪತಿಯನ್ನು ಒಟ್ಟಿಗೆ ಮಾಡುವ ಎಲ್ಲಾ ವಿಧಾನಗಳು ವಿಫಲವಾದಾಗ ಮಾತ್ರ ‘ತಲಾಖ್’ ಮೊರೆ ಹೋಗಬೇಕು. ಆದರೆ, ಈಗ ಈ ಎಲ್ಲಾ ಆಶಯಗಳಿಗೆ ವಿರುದ್ಧವಾಗಿ ಆಚರಣೆ ನಡೆಯುತ್ತಿದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.</p>.<p>ಸ್ವೇಚ್ಛೆ ಮತ್ತು ಏಕಪಕ್ಷಿಯವಾಗಿ ಪತಿಯು ತಲಾಖ್ ಹೇಳುವ ಮೂಲಕ ವಿಚ್ಛೇದನ ಪಡೆಯುವುದು ಇಸ್ಲಾಂ ಧಾರ್ಮಿಕ ಕಾಯ್ದೆಗಳ ಅನ್ವಯ ನಿಯಮ ಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.</p>.<p>ಪತ್ನಿ ಎಲ್ಲಿಯವರೆಗೆ ಪತಿಗೆ ವಿಶ್ವಾಸಾರ್ಹ ಮತ್ತು ವಿದೇಯಳಾಗಿರುತ್ತಾಳೊ ಅಲ್ಲಿಯವರೆಗೆ ಪತಿ ವಿಚ್ಛೇದನ ನೀಡಲು ಅವಕಾಶ ಇಲ್ಲ ಎಂದು ಕುರಾನ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ನ.5ರಂದು ನೀಡಿರುವ ಆದೇಶವನ್ನು ಕೋರ್ಟ್ ಉಲ್ಲೇಖಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಲಹಾಬಾದ್: </strong>ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ಈ ಪದ್ಧತಿಯು ಅತ್ಯಂತ ಕ್ರೂರ ಹಾಗೂ ಅವಹೇಳನಕಾರಿ ಎಂದು ಅಭಿಪ್ರಾಯಪಟ್ಟಿದೆ.</p>.<p>ದಂಪತಿ ನಡುವೆ ಹೊಂದಾಣಿಕೆಗೆ ಸಾಧ್ಯವೇ ಇಲ್ಲ ಎಂದಾಗ ಕೊನೆ ಕ್ಷಣದಲ್ಲಿ ವಿಚ್ಛೇದನ ನೀಡಬೇಕು ಎಂದು ಮುಸ್ಲಿಂ ಕಾನೂನಿನಲ್ಲಿ ಉಲ್ಲೇಖಿತವಾಗಿದೆ. ದಂಪತಿಯನ್ನು ಒಟ್ಟಿಗೆ ಮಾಡುವ ಎಲ್ಲಾ ವಿಧಾನಗಳು ವಿಫಲವಾದಾಗ ಮಾತ್ರ ‘ತಲಾಖ್’ ಮೊರೆ ಹೋಗಬೇಕು. ಆದರೆ, ಈಗ ಈ ಎಲ್ಲಾ ಆಶಯಗಳಿಗೆ ವಿರುದ್ಧವಾಗಿ ಆಚರಣೆ ನಡೆಯುತ್ತಿದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.</p>.<p>ಸ್ವೇಚ್ಛೆ ಮತ್ತು ಏಕಪಕ್ಷಿಯವಾಗಿ ಪತಿಯು ತಲಾಖ್ ಹೇಳುವ ಮೂಲಕ ವಿಚ್ಛೇದನ ಪಡೆಯುವುದು ಇಸ್ಲಾಂ ಧಾರ್ಮಿಕ ಕಾಯ್ದೆಗಳ ಅನ್ವಯ ನಿಯಮ ಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.</p>.<p>ಪತ್ನಿ ಎಲ್ಲಿಯವರೆಗೆ ಪತಿಗೆ ವಿಶ್ವಾಸಾರ್ಹ ಮತ್ತು ವಿದೇಯಳಾಗಿರುತ್ತಾಳೊ ಅಲ್ಲಿಯವರೆಗೆ ಪತಿ ವಿಚ್ಛೇದನ ನೀಡಲು ಅವಕಾಶ ಇಲ್ಲ ಎಂದು ಕುರಾನ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ನ.5ರಂದು ನೀಡಿರುವ ಆದೇಶವನ್ನು ಕೋರ್ಟ್ ಉಲ್ಲೇಖಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>