ನವದೆಹಲಿ: ಗಾಳಿಪಟ ಹಾರಿಸಲು ಬಳಸುವ ಗಾಜಿನ ಪುಡಿ ಲೇಪಿತ ‘ಮಾಂಜಾ’ ದಾರದ ಬಳಕೆಗೆ ಹಸಿರು ನ್ಯಾಯ ಮಂಡಳಿ (ಎನ್ಜಿಟಿ) ವಿಧಿಸಿರುವ ಮಧ್ಯಂತರ ನಿಷೇಧವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಗುಜರಾತ್ನ ವ್ಯಾಪಾರಿಗಳ ಗುಂಪೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಬಿ. ಲೋಕುರ್ ಮತ್ತು ಪಿ.ಸಿ. ಪಂತ್ ಅವರನ್ನು ಒಳಗೊಂಡ ನ್ಯಾಯಪೀಠ, ಅರ್ಜಿದಾರರು ಎನ್ಜಿಟಿಗೆ ಮನವಿ ಸಲ್ಲಿಸಬಹುದು ಎಂದು ಸಲಹೆ ನೀಡಿತು.
ಕಾನೂನಿನ ಅವಕಾಶಗಳನ್ನು ಪರಿಗಣಿಸದೆಯೇ ಎನ್ಜಿಟಿ ಆದೇಶ ಹೊರಡಿಸಿದೆ ಎಂದು ವ್ಯಾಪಾರಿಗಳ ಪರ ವಕೀಲರು ಆರೋಪಿಸಿದರು.
ಆದರೆ, ದಾರವು ಗಾಜು ಲೇಪಿತವಾಗಿರುವುದರಿಂದ ಪ್ರಾಣಿ–ಪಕ್ಷಿಗಳಿಗೆ ಅಪಾಯಕಾರಿಯಾಗಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು.