<p><strong>ಪಾಂಡವಪುರ: </strong>ಭಾಷೆ ನಾಶವಾದರೆ ಮನುಷ್ಯ ಸಂಬಂಧ, ಸಂಸ್ಕೃತಿ, ಪರಂಪರೆ ನಾಶವಾಗುತ್ತದೆ. ಪ್ರತಿ ಮನೆ ಯಲ್ಲಿ ‘ಮಮ್ಮಿ- ಡ್ಯಾಡಿ’ ಸಂಸ್ಕೃತಿ ಹೋಗಿ ‘ಅಪ್ಪ- ಅವ್ವ’ ಸಂಸ್ಕೃತಿ ಬೆಳೆಯ ಬೇಕಾಗಿದೆ ಎಂದು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು.<br /> <br /> ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶನಿವಾರ ನಡೆದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. <br /> <br /> ಹಳ್ಳಿ ಮತ್ತು ಭಾಷೆಯನ್ನು ರಕ್ಷಣೆ ಮಾಡಬೇಕಾಗಿದೆ. ಭಾಷೆ, ಜಾನಪದ, ಮನುಷ್ಯ ಸಂಬಂಧಗಳು ಉಳಿದಿರು ವುದೇ ನಮ್ಮ ಹಳ್ಳಿಗಳಲ್ಲಿ. ಹಾಗಾಗಿ, ಹಳ್ಳಿ ಉಳಿದರಷ್ಟೇ ಕೃಷಿ, ರೈತ, ಆಹಾರ ಭದ್ರತೆ ಉಳಿಯಲು ಸಾಧ್ಯ ಎಂದರು.<br /> <br /> ಸಂಸದ ಸಿ.ಎಸ್.ಪುಟ್ಟರಾಜು, ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ಡಾ.ಜಯಲಕ್ಷ್ಮಿ ಸೀತಾಪುರ, ಸಿ.ಕೆ.ರವಿಕುಮಾರ್, ಉಪಾಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಬೀರಶೆಟ್ಟಹಳ್ಳಿ ರಮೇಶ್, ಎನ್.ಚಲುವೇ ಗೌಡ, ಎಂ.ಅಂಕೇಗೌಡ ಇದ್ದರು. <br /> <br /> ನಾಗರಾಜೇಗೌಡ, ಮರಿಜೋಸೆಫ್, ಮಂಜುಲಾ, ಮುರುಗನ್, ಎಚ್.ಜಿ. ಗೋವಿಂದರಾಜ್, ಚನ್ನಮಾದೇಗೌಡ, ಗೌರಮ್ಮ ಮರಿಗೌಡ, ಸಿ.ಎಸ್.ಸುಪ್ರೀತ್, ತಿಮ್ಮೇಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ 16 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.<br /> <br /> ಚಿನಕುರಳಿಯ ಪಿ.ನಿವೇದಿತಾ ಅವರ ಯೋಗಾ ಪ್ರದರ್ಶನ ಹಾಗೂ ಕ್ಯಾತನಹಳ್ಳಿ ಕೌಸ್ತುಭ ಅವರು ಪ್ರದರ್ಶಿಸಿದ ‘ಭರತ ನಾಟ್ಯ’ ನೃತ್ಯ ಎಲ್ಲರ ಗಮನ ಸೆಳೆಯಿತು.<br /> ಬೆಂಗಳೂರಿನ ಅಜೀವಿಕ ತಂಡವು ಪ್ರದರ್ಶಿಸಿದ ‘ಪೋಸ್ಟ್ ಬಾಕ್ಸ್ ನಂ.9’ ನಾಟಕ ಮೆಚ್ಚುಗೆಗೆ ಪಾತ್ರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ: </strong>ಭಾಷೆ ನಾಶವಾದರೆ ಮನುಷ್ಯ ಸಂಬಂಧ, ಸಂಸ್ಕೃತಿ, ಪರಂಪರೆ ನಾಶವಾಗುತ್ತದೆ. ಪ್ರತಿ ಮನೆ ಯಲ್ಲಿ ‘ಮಮ್ಮಿ- ಡ್ಯಾಡಿ’ ಸಂಸ್ಕೃತಿ ಹೋಗಿ ‘ಅಪ್ಪ- ಅವ್ವ’ ಸಂಸ್ಕೃತಿ ಬೆಳೆಯ ಬೇಕಾಗಿದೆ ಎಂದು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು.<br /> <br /> ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶನಿವಾರ ನಡೆದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. <br /> <br /> ಹಳ್ಳಿ ಮತ್ತು ಭಾಷೆಯನ್ನು ರಕ್ಷಣೆ ಮಾಡಬೇಕಾಗಿದೆ. ಭಾಷೆ, ಜಾನಪದ, ಮನುಷ್ಯ ಸಂಬಂಧಗಳು ಉಳಿದಿರು ವುದೇ ನಮ್ಮ ಹಳ್ಳಿಗಳಲ್ಲಿ. ಹಾಗಾಗಿ, ಹಳ್ಳಿ ಉಳಿದರಷ್ಟೇ ಕೃಷಿ, ರೈತ, ಆಹಾರ ಭದ್ರತೆ ಉಳಿಯಲು ಸಾಧ್ಯ ಎಂದರು.<br /> <br /> ಸಂಸದ ಸಿ.ಎಸ್.ಪುಟ್ಟರಾಜು, ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ಡಾ.ಜಯಲಕ್ಷ್ಮಿ ಸೀತಾಪುರ, ಸಿ.ಕೆ.ರವಿಕುಮಾರ್, ಉಪಾಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಬೀರಶೆಟ್ಟಹಳ್ಳಿ ರಮೇಶ್, ಎನ್.ಚಲುವೇ ಗೌಡ, ಎಂ.ಅಂಕೇಗೌಡ ಇದ್ದರು. <br /> <br /> ನಾಗರಾಜೇಗೌಡ, ಮರಿಜೋಸೆಫ್, ಮಂಜುಲಾ, ಮುರುಗನ್, ಎಚ್.ಜಿ. ಗೋವಿಂದರಾಜ್, ಚನ್ನಮಾದೇಗೌಡ, ಗೌರಮ್ಮ ಮರಿಗೌಡ, ಸಿ.ಎಸ್.ಸುಪ್ರೀತ್, ತಿಮ್ಮೇಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ 16 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.<br /> <br /> ಚಿನಕುರಳಿಯ ಪಿ.ನಿವೇದಿತಾ ಅವರ ಯೋಗಾ ಪ್ರದರ್ಶನ ಹಾಗೂ ಕ್ಯಾತನಹಳ್ಳಿ ಕೌಸ್ತುಭ ಅವರು ಪ್ರದರ್ಶಿಸಿದ ‘ಭರತ ನಾಟ್ಯ’ ನೃತ್ಯ ಎಲ್ಲರ ಗಮನ ಸೆಳೆಯಿತು.<br /> ಬೆಂಗಳೂರಿನ ಅಜೀವಿಕ ತಂಡವು ಪ್ರದರ್ಶಿಸಿದ ‘ಪೋಸ್ಟ್ ಬಾಕ್ಸ್ ನಂ.9’ ನಾಟಕ ಮೆಚ್ಚುಗೆಗೆ ಪಾತ್ರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>