ಈ ವರದಿಗಳಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ನಿಜವಾದ ಹೆಸರು ಮತ್ತು ಭಾವಚಿತ್ರ ಪ್ರಕಟಿಸಿರುವುದು ಅಪರಾಧ. ವಿಶ್ವೇಶ್ವರ ಭಟ್ ಮತ್ತು ವಿನಾಯಕ ಭಟ್ಟ ಮೂರೂರು ಅವರು ಭಾರತೀಯ ದಂಡ ಸಂಹಿತೆ–1860 (ಐಪಿಸಿ) ಕಲಂ 228 ಅನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಇಬ್ಬರೂ ಶಿಕ್ಷೆಗೆ ಅರ್ಹರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಐಪಿಸಿ 228 ಏನು ಹೇಳುತ್ತದೆ..?
ಯಾವುದೇ ಸಾರ್ವಜನಿಕ ಅಧಿಕಾರಿ ನಡೆಸುವ ನ್ಯಾಯಾಂಗ ವಿಚಾರಣಾ ಪ್ರಕ್ರಿಯೆ ಸಂದರ್ಭದಲ್ಲಿ, ಅಂತಹ ಸಾರ್ವಜನಿಕ ಅಧಿಕಾರಿಯನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಅವಮಾನಿಸಿದರೆ, ಇಲ್ಲವೇ; ಅಡೆತಡೆ ಉಂಟು ಮಾಡಿದರೆ, ಅಂತಹವನನ್ನು ಆರು ತಿಂಗಳವರೆಗಿನ (ಒಂದು ದಿನದಿಂದ ಆರು ತಿಂಗಳಿನವರೆಗೆ) ಸಾದಾ ಸಜೆ ವಿಧಿಸಬಹುದು. ಅಥವಾ ₹ 1 ಸಾವಿರ ದಂಡ ವಿಧಿಸಬಹುದು. ಇಲ್ಲವೇ ಸಜಾ ಮತ್ತು ದಂಡ ಎರಡನ್ನೂ ವಿಧಿಸಬಹುದು.