‘ಒಟ್ಟು 1 ಎಕರೆ 30 ಗುಂಟೆ ಜಮೀನಿನಲ್ಲಿ (ಸರ್ವೆ ನಂಬರ್ 111/4ರಲ್ಲಿ 31 ಗುಂಟೆ, 111/3ಎನಲ್ಲಿ 22 ಗುಂಟೆ, 138/1ಎ–1ರಲ್ಲಿ 6 ಗುಂಟೆ) ರಾಗಿ ಬಿತ್ತನೆ ಮಾಡಿದ್ದೆ. ಮಳೆ ಇಲ್ಲದೇ ಬೆಳೆ ಒಣಗಿ ಹೋಯಿತು. ವರ್ಷಪೂರ್ತಿ ನಯಾಪೈಸೆ ಬೆಳೆಯೂ ಇಲ್ಲ. ಕನಿಷ್ಠ ಬೆಳೆಹಾನಿ ಲಭಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಎಕರೆಗೆ ₹ 6 ಸಾವಿರ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಕೇವಲ ₹ 1 ಪರಿಹಾರ ಬಂದಿದೆ’ ಎಂದು ರೈತ ಶಿವರಾಮಯ್ಯ ಸಮಸ್ಯೆ ಹೇಳಿಕೊಂಡರು.