ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು. ಈ ತಂಡ ಬೆಂಗಳೂರಿನಲ್ಲಿರುವ ತಿವಾರಿ ಅವರ ಮನೆಗೂ
ಭೇಟಿ ನೀಡಿ ತನಿಖೆ ನಡೆಸಿತ್ತು. ‘ಅತಿಯಾದ ಔಷಧ ಸೇವನೆಯೂ ಸಾವಿಗೆ ಕಾರಣ ಆಗಿರಬಹುದು’ ಎಂಬ ಅನುಮಾನವನ್ನು ಎಸ್ಐಟಿ ವ್ಯಕ್ತಪಡಿಸಿತ್ತು.
ಎಸ್ಐಟಿ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿವಾರಿ ಕುಟುಂಬದ ಸದಸ್ಯರು ಆರೋಪಿಸಿದ್ದರು.