ತುಮಕೂರು: ಚಿರತೆಯೊಂದು ಮೇಕೆಗಳ ಸಾಕಣೆ ಮನೆಗೆ ದಾಳಿ ಮಾಡಿದ್ದು, 14 ಮೇಕೆಗಳು ಸಾವಿಗೀಡಾದ ಘಟನೆ ತುಮಕೂರು ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಜಿಲ್ಲೆಯ ಕೊರಟಗೆರೆ ತಾಲ್ಲೂಕು ಮಾವತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಬಳಿ ರೈತ ರಾಮಯ್ಯ ಅವರು ತೋಟದ ಮನೆ ಬಳಿ ಸಾಕಿದ್ದ 14ಕ್ಕೂ ಹೆಚ್ಚು ಮೇಕೆಗಳ ಮೇಲೆ ಬೆಳಗಿನಜಾವ ಚಿರತೆ ದಾಳಿ ನಡೆಸಿದ್ದು, ಎಲ್ಲಾ ಮೇಕೆಗಳು ಮೃತಪಟ್ಟಿವೆ.