ರೈತರ ಸಾಲ ಮನ್ನಾ ಮಾಡಲು ಕೇಂದ್ರದ ಕಡೆಗೆ ಬೆರಳು ತೋರಿಸುವ ಸಿಎಂಗೆ ನಾಚಿಕೆ ಯಾಗಬೇಕು. ಅವರೊಮ್ಮೆ ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಗಿ ತರಬೇತಿ ಪಡೆಯಲಿ ಎಂದು ಅವರು ಸಲಹೆ ನೀಡಿದರು.
ನಾಲ್ಕು ವರ್ಷ ನಿದ್ದೆಯಲ್ಲಿ ಮುಳುಗಿದ್ದ ರಾಜ್ಯ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿವೃದ್ಧಿಯ ನಾಟಕ ಮಾಡುತ್ತಿದೆ. ನಾಲ್ಕು ವರ್ಷ ಮಾಡದೇ ಇದ್ದುದನ್ನು ಉಳಿದ ಏಳೆಂಟು ತಿಂಗಳಲ್ಲಿ ಮಾಡಲು ಸಾಧ್ಯವೇ ಎಂದು ಅರ್ಚನಾ ಪ್ರಶ್ನಿಸಿದರು.
ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ‘ಕೇಂದ್ರದ ಉಜ್ವಲ ಯೋಜನೆಗೆ ರಾಜ್ಯ ಸರ್ಕಾರ ಅನಿಲ ಭಾಗ್ಯ ಎಂದು ಹೆಸರಿಟ್ಟು, ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಈ ಸರ್ಕಾರ ದೊಡ್ಡ ಸಾಧನೆ ಮಾಡಿರುವುದು ಪ್ರತಿದಿನ ನೀಡುತ್ತಿರುವ ಜಾಹೀರಾತಿನಲ್ಲಿ ಮಾತ್ರ’ ಎಂದು ಟೀಕಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿದರು. ಪಕ್ಷದ ಹಿಂದುಳಿದ ವಿಭಾಗದ ರಾಜ್ಯ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ಎಂ. ಜಯಣ್ಣ, ಸುರೇಶ್, ಆರ್. ರಾಮಯ್ಯ, ಟಿ. ಚಂದ್ರಶೇಖರ್, ಮುರಳಿ,ರತ್ನಮ್ಮ, ರಾಮದಾಸ್, ಪೂರ್ಣಿಮಾ ಪ್ರತಾಪ್, ಕೆ. ದ್ಯಾಮಣ್ಣ, ಜಿ.ಪಿ. ಯಶವಂತರಾಜು, ಕೇಶವಮೂರ್ತಿ ಉಪಸ್ಥಿತರಿದ್ದರು.