ವಿದ್ಯಾರ್ಥಿನಿಧಿಗೆ ಅರ್ಜಿ ಸಲ್ಲಿಸಿ ಪಡೆದ ಹಣದಿಂದ ಕಾಲೇಜು ಶುಲ್ಕ ತುಂಬಲು ಅನುಕೂಲವಾಯಿತು. ‘ಪ್ರಜಾವಾಣಿ’ಗೆ ಧನ್ಯವಾದಗಳು. ನಾನು ಅಧಿಕಾರಿಯಾದ ಮೇಲೆ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂಬ ಪ್ರೇರಣೆಯೂ ಒದಗಿದೆ. ಕೆ.ವಿ.ರಂಜಿತಾ, ಹಲವಾಗಲು, ಚಿತ್ರದುರ್ಗ
***
‘ಪ್ರಜಾವಾಣಿ’ ವಿದ್ಯಾರ್ಥಿನಿಧಿಯಿಂದ ನೀಡಿದ ಸ್ಕಾಲರ್ಶಿಪ್ ಅಗತ್ಯ ಸಂದರ್ಭದಲ್ಲಿ ನೆರವಿಗೆ ಬಂತು. ಈ ಹಣದಿಂದ ಹಾಸ್ಟೆಲ್ ಶುಲ್ಕ ತುಂಬಿದೆ. ಉಳಿದ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿದೆ. ನಿರಂಜನ ಬಿ.ಎಸ್, ಜೀನಹಳ್ಳಿ, ಹೊನ್ನಾಳಿ ತಾಲ್ಲೂಕು
***
‘ಪ್ರಜಾವಾಣಿ’ ವಿದ್ಯಾರ್ಥಿನಿಧಿಯಿಂದ ಪಡೆದ ಸ್ಕಾಲರ್ಶಿಪ್ ಹಣವನ್ನು ಕಲಿಕೆಗೆ ಸಂಬಂಧಿಸಿದ ಪುಸ್ತಕಗಳ ಖರೀದಿಗೆ ಬಳಸಿದೆ. ಪ್ರಥಮ ಪಿಯುನಲ್ಲಿ ಶೇ 95 ಅಂಕ ಬಂದಿದೆ.
ಸ್ಪೂರ್ತಿ ಬಿ, ಹಿರಿಯೂರು
***
ಪತ್ರಿಕೆ ನೀಡಿದ ಸ್ಕಾಲರ್ಶಿಪ್ ಹಣದಿಂದ ಉತ್ತಮ ಕಾಲೇಜಿಗೆ ಸೇರಲು ಅನುಕೂಲವಾಯಿತು. ಪಿಯು ಪರೀಕ್ಷೆಯಲ್ಲಿ ಶೇ 80 ಅಂಕ ಗಳಿಸಿದ್ದೇನೆ.