ಈ ಕುರಿತು ಮಾತನಾಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆರ್.ಹಿತೇಂದ್ರ, ‘ಉದ್ಯಾನದಲ್ಲಿ ವರ್ಷಪೂರ್ತಿ ವಾಹನಗಳ ಸಂಚಾರ ನಿಷೇಧಿಸುವ ಅಧಿಕಾರ ತೋಟಗಾರಿಕೆ ಇಲಾಖೆಗೆ ಇದೆ’ ಎಂದು ಹೇಳಿದರು. ತೋಟಗಾರಿಕೆ ಇಲಾಖೆಯ ಆಯುಕ್ತ ಪಿ.ಸಿ.ರೇ ಮಾತನಾಡಿ, ‘ಜುಲೈ 8ರಂದು ವಾಹನಗಳು ಸಂಚರಿಸದಂತೆ ನೋಡಿಕೊಳ್ಳುವ ಭರವಸೆ ಪೊಲೀಸರಿಂದ ಸಿಕ್ಕಿದೆ’ ಎಂದು ತಿಳಿಸಿದರು.