‘ಒಂದು ವೇಳೆ ಯುದ್ಧ ಸಂಭವಿಸಿದರೆ ಚೀನಾ ತನ್ನ ಗಡಿ ಹಾಗೂ ಭೂ ಪ್ರದೇಶದಲ್ಲಿ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲಿದೆ’ ಎಂದು ವರದಿಯಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿದ್ದು, 1962ರ ಯುದ್ಧದ ಬಗ್ಗೆ ಉಲ್ಲೇಖಿಸಲಾಗಿದೆ. ‘ಯುದ್ಧದಲ್ಲಿ ಚೀನಾ ಸೈನಿಕರು ಭಾರತದ 4,383 ಸೈನಿಕರನ್ನು ಹಾಗೂ ಭಾರತದ ಸೈನಿಕರು ಚೀನಾದ 722 ಸೈನಿಕರನ್ನು ಹತ್ಯೆ ಮಾಡಿದ್ದರು. ಈ ಬಳಿಕ ಚೀನಾ ತನ್ನ ಭೂ ಪ್ರದೇಶವನ್ನು ವಿಸ್ತರಿಸಿಕೊಂಡಿದೆ’ ಎಂದು ತಿಳಿಸಲಾಗಿದೆ.