ಶುಕ್ರವಾರ ಬೆಳಗ್ಗೆ ಮೈತ್ರಾ ಬಗಾನ್, ಹರೀಶ್ಪುರ್, ರಘುನಾಥ್ ಪುರ್, ತ್ಯಂತ್ರಾ ಮತ್ತು ಬೈಬ್ಲಾ ಮೊದಲಾದ ಪ್ರದೇಶಗಳಲ್ಲಿ ಅಂಗಡಿಗಳು ತೆರೆದಿವೆ. ವಾಹನ ಸಂಚಾರವೂ ಆರಂಭವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೋಮು ಸಂಘರ್ಷ ಆರಂಭವಾಗಿದ್ದ ಸ್ವರೂಪ್ನಗರ್ ಮತ್ತು ಬದೂರಿಯಾ ಎಂಬಲ್ಲಿಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.