ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರವಿರುವ ಬಸ್ತಾನ್ಪುರ ಪಂಗಾಗಿ ಎಂಬ ಹಳ್ಳಿಯಲ್ಲಿ 42 ವರ್ಷದ ರೈತ ಸರ್ದಾರ್ ಬರೇಲಾ ಅವರು 13 ವರ್ಷದ ರಾಧಾ ಮತ್ತು 9 ವರ್ಷದ ಕುಂತಿಯನ್ನು ಬಳಸಿಕೊಂಡು ಹೊಲ ಉಳುವ ವಿಡಿಯೊ ದೃಶ್ಯಗಳು ವೈರಲ್ ಆಗಿವೆ. ವಿಡಿಯೊ ಬಯಲಾಗುತ್ತಿದ್ದಂತೆ ಮುಜುಗರಕ್ಕೊಳಗಾದ ಜಿಲ್ಲಾಡಳಿತ, ಕಂದಾಯ ಅಧಿಕಾರಿಯನ್ನು ರೈತನ ಬಳಿಗೆ ಕಳುಹಿಸಿದೆ. ಮಕ್ಕಳನ್ನು ದುಡಿಮೆಗೆ ಬಳಸಬೇಡಿ ಎಂದು ಮನವಿ ಮಾಡಿದೆ.