ಬೇಗೂರು– ಹುಳಿಮಾವು ಮುಖ್ಯರಸ್ತೆಯ ಬಳಿ ಇರುವ ಅಕ್ಷಯನಗರ ಕೆರೆಯಲ್ಲಿ ಭಾನುವಾರ ಸಂಜೆ ಕಂಡುಬಂದ ದೃಶ್ಯಗಳಿವು.
ಜಲ ಮತ್ತು ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸಮಾನಮನಸ್ಕರ ವೇದಿಕೆ ‘ಜಲನಿಧಿ’ಯು ಅಕ್ಷಯನಗರ ಕೆರೆಯನ್ನು ಪುನರುಜ್ಜೀವನಗೊಳಿಸಿದೆ. ಬಿಡಿಎ, ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಕೆರೆಯ ಸುತ್ತಮುತ್ತಲಿನ ಪ್ರದೇಶದ ನಾಗರಿಕರ ಸಹಕಾರದಿಂದ ಕೆರೆಗೆ ಮರುಜೀವ ನೀಡಲಾಗಿದೆ.
ಕೆರೆಯ ಹೂಳು ತೆಗೆಯಲಾಗಿದೆ. ಕೆರೆ ಸುತ್ತಲೂ ಮಣ್ಣಿನ ನಡಿಗೆ ಪಥವನ್ನು ನಿರ್ಮಿಸಲಾಗಿದೆ. ಬಯಲು ರಂಗಮಂದಿರ, ಮಕ್ಕಳ ಆಟದ ಮೈದಾನ ನಿರ್ಮಿಸಲಾಗಿದೆ. ಗಿಡಗಳನ್ನು ನಡೆಲಾಗಿದೆ.