₹ 1 ಲಕ್ಷದವರೆಗೆ ಅಪಘಾತ ವಿಮೆ ಒದಗಿಸುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಂತ್ರಸ್ತೆ ಭರ್ತಿ ಮಾಡಿರಲಿಲ್ಲ ಎಂದು ಕೆನರಾ ಬ್ಯಾಂಕ್ನ ಡಹಾಣು ಶಾಖೆಯ ಅಧಿಕಾರಿಗಳು ಹೇಳುತ್ತಿರುವುದಾಗಿ ನಿರ್ಮಲಾ ಅವರ ಮಗ ಪ್ರದೀಪ್ ಠಾಕೂರ್ ತಿಳಿಸಿದ್ದಾರೆ. ‘ನನ್ನ ತಾಯಿಯವರು ಪ್ರಧಾನ ಮಂತ್ರಿ ಜನ ಧನ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದರು. ಬ್ಯಾಂಕ್ನವರು ವಿಮೆ ಮೊತ್ತ ಪಾವತಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತ ವಿಮೆ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಪ್ರದೀಪ್ ಠಾಕೂರ್ ಹೇಳಿದ್ದಾರೆ. ನಿರ್ಮಲಾ ಅವರು ಖಾತೆ ತೆರೆಯುವ ವೇಳೆ ತಮ್ಮ ಪತಿಯನ್ನು ನಾಮನಿರ್ದೇಶನ ಮಾಡಿದ್ದರು.