ದಕ್ಷ ಅಧಿಕಾರಿಗಳಿಗೆ ಯಾಕೆ ವರ್ಗಾವಣೆಯ ಶಿಕ್ಷೆ?

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ಅವ್ಯವಹಾರ ಕುರಿತು ಆರೋಪಿಸಿದ್ದ ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಲು ಆದೇಶಿಸಿರುವ ಸರ್ಕಾರದ ನಡೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ದಕ್ಷ ಅಧಿಕಾರಿಗಳಿಗೆ ಯಾಕೆ ವರ್ಗಾವಣೆಯ ಶಿಕ್ಷೆ ಎಂಬುದು ಜನರ ಪ್ರಶ್ನೆ.
ಕೆಲವು ದಿನಗಳ ಹಿಂದೆಯಷ್ಟೇ ಡಿಐಜಿ ಡಿ.ರೂಪಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ (ಸತ್ಯನಾರಾಯಣರಾವ್) ಅವರಿಗೆ ಪತ್ರ ಬರೆದು ಕಾರಾಗೃಹದಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು.
ಸೋಮವಾರ ಬೆಳಗ್ಗೆ ವರೆಗೆ ಕಾರಾಗೃಹ ಇಲಾಖೆಯ ಡಿಐಜಿ ಆಗಿದ್ದ ರೂಪಾ ಮೊದಗಿಲ್ ಅವರನ್ನು ಮಧ್ಯಾಹ್ನ ಹೊತ್ತಿಗೆ ಎತ್ತಂಗಡಿ ಮಾಡಲು ಸರ್ಕಾರ ಆದೇಶಿಸಿತ್ತು. ಇದೀಗ ರೂಪಾ ಅವರನ್ನು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ಆಯುಕ್ತರಾಗಿ ನೇಮಿಸಲಾಗಿದೆ.
ಮುಖ್ಯಮಂತ್ರಿ ಏನಂತಾರೆ?
ರೂಪಾ ಅವರನ್ನು ವರ್ಗಾವಣೆ ಮಾಡಿರುವ ಆದೇಶದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರಶ್ನೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ-
'ನಾವೇನು ಮಾಡಲಿ? ನಾವು ಅವರನ್ನು ವರ್ಗಾವಣೆ ಮಾಡಿಲ್ಲ'
ಆಡಳಿತಾತ್ಮಕ ಕಾರಣಗಳಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ. ನಾವಿಲ್ಲಿ ಕುಳಿತು ಇದನ್ನೆಲ್ಲ ಮಾಧ್ಯಮದವರಿಗೆ ವಿವರಿಸಲು ಆಗುವುದಿಲ್ಲ'
ಕಾರಾಗೃಹದಲ್ಲಿನ ಅವ್ಯವಹಾರದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಕೊಟ್ಟಿರುವ ಬಗ್ಗೆ ಸರ್ಕಾರಕ್ಕೆ ರೂಪಾ ಮೇಲೆ ಅಸಮಾಧಾನವಿದೆ ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ರೂಪಾ ಅವರನ್ನು ವರ್ಗಾವಣೆ ಮಾಡಿರುವುದಕ್ಕೆ ವಿಪಕ್ಷಗಳು ರಾಜ್ಯ ಸರ್ಕಾರ ವಿರುದ್ಧ ಕಿಡಿ ಕಾರಿವೆ.
ಈ ಬಗ್ಗೆ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ರೂಪಾ ಅವರನ್ನು ವಿನಾಕಾರಣ ವರ್ಗಾವಣೆ ಮಾಡಲಾಗಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಮತ್ತು ಅಪ್ರಾಮಾಣಿಕ ಅಧಿಕಾರಿಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದಿದ್ದಾರೆ.
ಸರ್ಕಾರ ಅಪ್ರಾಮಾಣಿಕ ವ್ಯಕ್ತಿಗಳನ್ನು ರಕ್ಷಿಸಲು ಮುತುವರ್ಜಿ ವಹಿಸುತ್ತಿದೆ. ಸರ್ಕಾರಕ್ಕೆ ಸತ್ಯ ಬಹಿರಂಗವಾಗಬೇಕು ಎಂಬ ಆಸಕ್ತಿ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Both DG & DIG have been transferred..as they are alleging against each other. Enquiry should take place in transparent manner. https://t.co/PHVyaYlV4o
— Dinesh Gundu Rao (@dineshgrao) July 17, 2017
ರೂಪಾ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ರೂಪಾ ಅವರು ಮಾಡಿರುವ ಆರೋಪ ತುಂಬಾ ಗಂಭೀರವಾದುದು. ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ. ಈ ಆರೋಪದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಏತನ್ಮಧ್ಯೆ, ರೂಪಾ ಅವರ ಆರೋಪದ ಬಗ್ಗೆ ತನಿಖೆ ನಡೆಸಲು ಆದೇಶಿಸಿರುವ ಸರ್ಕಾರದ ನಡೆಯನ್ನೂ ಪ್ರಶ್ನಿಸಲಾಗುತ್ತಿದೆ.
ರೂಪಾ ಅವರ ಆರೋಪಿಸಿರುವ ಜೈಲು ಅಕ್ರಮ ಹಾಗೂ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿಯನ್ನು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ಗೆ ನೀಡಲಾಗಿದೆ. ಈ ಬಗ್ಗೆ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ತನ್ವೀರ್ ಅಹಮದ್, ಈ ರೀತಿಯ ತನಿಖೆಗಳು ಕಣ್ಕಟ್ಟು ಅಷ್ಟೇ. ಇಂಥಾ ವಿಷಯಗಳ ತನಿಖೆಯನ್ನು ನಿವೃತ್ತ ನ್ಯಾಯಾಧೀಶರು ಮಾಡಬೇಕು. ಈ ತನಿಖೆಗಳಿಂದ ಸರಿಯಾದ ಉತ್ತರ ಲಭಿಸುತ್ತದೆ ಎಂಬ ಯಾವ ನಿರೀಕ್ಷೆ ನಮಗಿಲ್ಲ ಎಂದಿದ್ದಾರೆ.
[related]
ಸಾಮಾಜಿಕ ತಾಣದಲ್ಲಿ ರೂಪಾ ಅವರಿಗೆ ಭಾರಿ ಬೆಂಬಲ
ರೂಪಾ ಅವರ ವರ್ಗಾವಣೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿರುವ ನೆಟಿಜನ್ಗಳು ಫೇಸ್ಬುಕ್, ಟ್ವಿಟರ್ನಲ್ಲಿ ರೂಪಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.
"Assault on Honest Officers Continues?" DIG Smt. Roopa exposed irregularities in B'luru prison & @INCIndia Govt gifted her with transfer.
— N Ravi Kumar (@nrkbjp) July 17, 2017
Karnataka Govt shot the messenger (DIG Roopa) to avoid embarrassment?
— Sureshkumar (@nimmasuresh) July 17, 2017
Dr.Roopa is unceremoniously shifted! Now you know what fate awaits to the enquiry regarding jail scam in Karnataka.
— srinivas cs (@srinilawyer) July 17, 2017
#BREAKING -- DIG prisons D Roopa transferred to DIG and Commissioner of traffic road safety pic.twitter.com/6Mp7Jo181h
— News18 (@CNNnews18) July 17, 2017
DIG Roopa transfered...So even exposing the corruption is offense under @CMofKarnataka Govt.??? #DontPunishHonestOfficer @NSNandiesha
— AmbrishNagaraj (@yeldurambrish) July 17, 2017