ಕುಶಾಲನಗರ– ಮಡಿಕೇರಿ ಹೆದ್ದಾರಿಯ ಆನೆಕಾಡು ಅರಣ್ಯದ ಬಳಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಒಂಟಿ ಸಲಗವು ಕಾರ್ಯಾಚರಣೆ ತಂಡದ ಕಣ್ಣಿಗೆ ಬಿದ್ದಿದೆ. ವೈದ್ಯ ಡಾ.ಉಮಾಶಂಕರ್ ಅವರ ನೇತೃತ್ವದ ತಂಡವು ಅರಿವಳಿಕೆ ಚುಚ್ಚುಮದ್ದು ತುಂಬಿದ ಗುಂಡು ಹಾರಿಸಿದರು. ಚುಚ್ಚುಮದ್ದು ದೇಹಕ್ಕೆ ಸ್ಪರ್ಶ ಆಗುತ್ತಿದಂತೆಯೇ ಕೋಪಗೊಂಡ ಆನೆ ಸುಮಾರು 2 ಕಿಲೋ ಮೀಟರ್ ದೂರ ಓಡಿ ಹೋಗಿ ಹಳ್ಳವೊಂದರಲ್ಲಿ ಬಿದ್ದಿತು. ಆಗ ಅಭಿಮನ್ಯು, ಕೃಷ್ಣ, ಧನಂಜಯ, ಈಶ್ವರ, ಅಜಯ್, ಕಂಚನ್, ಗಜೇಂದ್ರ ಹೆಸರಿನ ಸಾಕಾನೆಗಳಿಂದ ಕಾಡಾನೆಯನ್ನು ನಿಯಂತ್ರಣಕ್ಕೆ ತಂದು ಹಳ್ಳದಿಂದ ಎಳೆದು ತರಲಾಯಿತು.