ಕೇಂದ್ರ ಸರ್ಕಾರಕ್ಕೆ ಹಿಂದಿ ಹೇರುವ ವಿಚಾರದಲ್ಲಿ ಮಾತ್ರ ಕರ್ನಾಟಕ ನೆನಪಾಗುತ್ತದೆ ಎನ್ನುವ ಮಾತು ಈಗ ದೃಢಪಟ್ಟಿದೆ. ಕೇಂದ್ರ ಸರ್ಕಾರದ ವಿವಿಧ ಸಮಿತಿ, ಆಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಕೇಂದ್ರ ಸಚಿವ ಸಂಪುಟದಲ್ಲೂ ಮಹತ್ವದ ಖಾತೆಗಳು ಕರ್ನಾಟಕದವರಿಗೆ ಲಭಿಸಿಲ್ಲ. ರಾಜ್ಯಪಾಲರ ಸ್ಥಾನವೂ ಕರ್ನಾಟಕದವರಿಗೆ ಇಲ್ಲ... ರಾಜ್ಯ ಇಷ್ಟು ನಿರ್ಲಕ್ಷ್ಯಕ್ಕೆ ಒಳಗಾದರೂ ಕರ್ನಾಟಕದ ಬಿಜೆಪಿ ಧುರೀಣರು ಧ್ವನಿ ಎತ್ತುತ್ತಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.