ಸೋಮನಗೌಡ್ರ ಅವರು ವಿಮಾನ ನಿಲ್ದಾಣವೊಂದರಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ಅದೆಲ್ಲವನ್ನೂ ಬಿಟ್ಟು ಕೃಷಿ ಭೂಮಿಗೆ ಮರಳಿದ್ದಾರೆ. ಗಾವರಾಳ ರಸ್ತೆಯ ಹತ್ತಿರದ ತೋಟದಲ್ಲಿ ನಾಲ್ಕು ಎಕರೆ ಭೂಮಿಯನ್ನು ಮಿಶ್ರ ಬೆಳೆ ಬೆಳೆಯಲು ನಿರ್ಧರಿಸಿದರು. 'ಡಿಎಪಿ 1 ಕ್ವಿಂಟಲ್, ಪೋಟ್ಯಾಷ್ 50 ಕೆಜಿ, 1 ಕ್ವಿಂಟಲ್ ಬೇವಿನ ಹಿಂಡಿ, ಎಸ್ಎಪಿ 80 ಕೆಜಿ ಹಾಕಿ ಭೂಮಿ ಅಣಿ ಮಾಡಿದೆ.