ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಲ್ಲಿ ಅಪರಿಚಿತರಿಂದ ಥಳಿತ

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಜಫ್ಫರ್‌ನಗರ : ದೆಹಲಿ– ಹರಿದ್ವಾರ ಮಾರ್ಗದ ರೈಲಿನಲ್ಲಿ ಸೀಟು ಬಿಟ್ಟುಕೊಡದ ಸಲುವಾಗಿ 12 ಪುರುಷರಿದ್ದ ತಂಡವು ಒಂದೇ ಕುಟುಂಬದ ಮೂವರನ್ನು ಥಳಿಸಿದ ಘಟನೆ ಬವೋಲಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಜಾವೇದ್ ಹಾಗೂ ಅವರ ಪತ್ನಿ ಜುಮಾ ಬೇಗಮ್, ಜುಮಾ ಅವರ ಸೋದರಿ ರೇಷ್ಮಾ ಥಳಿತಕ್ಕೊಳಗಾದವರು. ಥಾಣಾ ಭವನ್ ನಿಲ್ದಾಣದಿಂದ ಲೋನಿಗೆ ಹೊರಟಿದ್ದ ಇವರು, ದಾಳಿ ನಡೆದಿದ್ದರಿಂದ ಬವೋಲಿ ರೈಲು ನಿಲ್ದಾಣದಲ್ಲೇ ಇಳಿದುಕೊಂಡಿದ್ದಾರೆ.

‘ಸೀಟು ತೆರವು ಮಾಡುವಂತೆ ಒತ್ತಾಯಿಸಿ ಅಪರಿಚಿತರ ಗುಂಪಿನಿಂದ ದಾಳಿಗೆ ಒಳಗಾದ ಸಂತ್ರಸ್ತರು ದೂರು ನೀಡಿದ್ದಾರೆ. ಆರೋಪಿ
ಗಳಿಗಾಗಿ ಶೋಧ ನಡೆದಿದೆ’ ಎಂದು ಬರೌತ್ ರೈಲ್ವೆ ಪೊಲೀಸ್ ಅಧಿಕಾರಿ ಸುಖಪಾಲ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT