‘ಮಲ್ಲೇಶ್ವರ ಉಪವಿಭಾಗದ ಎಸಿಪಿ ಅವರು ಇತ್ತೀಚೆಗೆ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿದ್ದರು. ಅದಕ್ಕೆ ಉತ್ತರಿಸಿರುವ ಯಡಿಯೂರಪ್ಪ, ‘ನನಗೆ 65 ವರ್ಷವಾಗಿದೆ. ವಿಚಾರಣೆಗೆ ಬರಲು ಆಗುವುದಿಲ್ಲ. ಮನೆಗೆ ಬಂದು ಹೇಳಿಕೆ ಪಡೆಯಿರಿ’ ಎಂದು ಹೇಳಿರುವುದು ಸರಿಯಲ್ಲ. 60 ವರ್ಷವಾದ ನಂತರವೇ ಅವರು ಮುಖ್ಯಮಂತ್ರಿ ಆಗಿದ್ದರು. ಹೊಸ ಪಕ್ಷವನ್ನೂ ಕಟ್ಟಿದ್ದರು. ರಾಜ್ಯದಲ್ಲೆಲ್ಲ ಪ್ರವಾಸ ಮಾಡಲು ಅಡ್ಡಿಯಾಗದ ವಯಸ್ಸು, ವಿಚಾರಣೆ ಹಾಜರಾಗಲು ಹೇಗೆ ಅಡ್ಡಿಯಾಗುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.