ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರ, ಶೋಷಣೆ, ದೌರ್ಜನ್ಯ ರಹಿತವಾದ ಸಮಾನ ಅವಕಾಶಗಳನ್ನು ಒಳಗೊಂಡ ಪ್ರಬುದ್ಧ ದೇಶ ನಿರ್ಮಾಣಕ್ಕಾಗಿ ಹೊಸ ಪಕ್ಷ ಸ್ಥಾಪನೆಗೆ ಮುಂದಾಗುತ್ತಿದ್ದೇವೆ. ಶೋಷಿತ ಸಮುದಾಯ ಈ ದೇಶದ ಆಳುವ ವರ್ಗ ಆಗಬೇಕು ಎಂಬುದನ್ನು ನನಸು ಮಾಡಲು ಪಕ್ಷ ಬದ್ಧವಾಗಿದೆ’ ಎಂದರು.