ಅಫಜಲಪುರ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳೆ ಮತ್ತು ಬಿರುಗಾಳಿಗೆ ಕಟಾವಿಗೆ ಬಂದಿರುವ ಕಬ್ಬು ಬೆಳೆ ನೆಲಕ್ಕೆ ಬಿದ್ದು ಹಾಳಾಗಿದೆ ಎಂದು ರೈತರು ದೂರಿದ್ದಾರೆ.
ತಾಲ್ಲೂಕಿನ ಬಳೂರ್ಗಿ ಗ್ರಾಮದ ಭೀಮಣ್ಣ ಪೂಜಾರಿ, ಸುರೇಶ ಮಠಪತಿ, ಬಸವರಾಜ ಚಲಗೇರಿ ಅವರಿಗೆ ಸೇರಿದ ಕಬ್ಬು ನೆಲಕ್ಕೆ ಬಿದ್ದು ಸುಮಾರು 20 ಎಕರೆ ಕಬ್ಬು ಹಾಳಾಗಿದೆ.