ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮೇಶ್ವರ ಜೋಷಿ ಖಾತೆಗೆ ಹಣ ವಾಪಸ್‌

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಳಸ: ಕಳೆದ ತಿಂಗಳು ಯೂರೋಪ್‌ ಪ್ರವಾಸದಲ್ಲಿದ್ದಾಗ ಆನ್‌ಲೈನ್‌ ಚೋರರಿಂದ ₹20 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ ಅವರಿಗೆ ಆ ಹಣ ಮರಳಿ ಬಂದಿದೆ.

ಜೋಷಿ ಅವರ ಡೆಬಿಟ್‌ ಕಾರ್ಡ್‌ ಹ್ಯಾಕ್ ಮಾಡಿದ್ದ ಚೋರರು ₹20ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿದ್ದರು. ಈ ಬಗ್ಗೆ ಜೋಷಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಕರ್ಣಾಟಕ ಬ್ಯಾಂಕ್‌ ಜೋಷಿ ಕಳೆದಕೊಂಡಿದ್ದ ₹20.89 ಲಕ್ಷವನ್ನು ಜೋಷಿ ಅವರ ಖಾತೆಗೆ ಜಮಾ ಮಾಡಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಭೀಮೇಶ್ವರ ಜೋಷಿ, ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌.ಅವರನ್ನು ಅಭಿನಂದಿಸಿದ್ದಾರೆ. ಬ್ಯಾಂಕ್‌ ವ್ಯವಹಾರ ಶ್ರೇಷ್ಠತೆಯ ಜತೆಗೆ ಮಾನವೀಯ ಸಂಬಂಧಗಳ ಮೌಲ್ಯ ಕಾಪಾಡುವಲ್ಲಿ ಬದ್ಧತೆ ತೋರಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT