ಕೇಂದ್ರ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಯೋಜನೆಗೆ ಚಾಲನೆ ನೀಡಿದರು. ‘ಈ ಮೊದಲು ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಅಂಚೆ ಜೀವ ವಿಮೆ ಯೋಜನೆಯ ಲಾಭವನ್ನು ಇನ್ನು ಮುಂದೆ ವೈದ್ಯರು, ಎಂಜಿನಿಯರ್ಗಳು, ವಕೀಲರು, ಲೆಕ್ಕ ಪರಿಶೋಧಕರಂತಹ ಖಾಸಗಿ ಉದ್ಯೋಗಿಗಳೂ ಪಡೆಯಬಹುದು’ ಎಂದು ತಿಳಿಸಿದರು.